ಕೊಲ್ಕತ್ತಾ : ಹಿಂದೂ ತಾಯಂದಿರು 4 ಮಕ್ಕಳಿಗೆ ಜನ್ಮ ನಿಡಬೇಕು ಎಂಬ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಹೇಳಿಕೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಶ್ಯಾಮಲ್ ಗೊಸ್ವಾಮಿ ಹಿಂದೂ ತಾಯಂದಿರು 5 ಮಕ್ಕಳನ್ನು ಹೆತ್ತರೆ ಮಾತ್ರ ಸನಾತನ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ಭಾರತದಲ್ಲಿ ರಕ್ಷಿಸಲು ಸಾಧ್ಯವೆಂದು ಹೇಳಿಕೆಯನ್ನು ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಂನ ಸಾರ್ವಜನಿಕ ಸಭೆಯಲ್ಲಿ ಮಾತಾಡಿದ ಅವರು, ಹಿಂದೂ ತಾಯಂದಿರು ಹಾಗೂ ನನ್ನ ಸಹೋದರಿಯರು ಅಪಾರ್ಥ ಮಾಡಿಕೊಳ್ಳದೆ ನಮ್ಮ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು 5 ಮಕ್ಕಳನ್ನು ಹೆತ್ತರೆ ಮಾತ್ರ ನಮಗೆ ಭಾರತದಲ್ಲಿ ಉಳಿಗಾಲವಿರುವುದು ಎಂದು ಹೇಳಿದ್ದಾರೆ.
ಈಗಾಗಲೇ ಸಾಕ್ಷಿ ಮಹರಾಜ್ ರವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿಯು ಶೋಕಾಸ್ ನೋಟಿಸ್ ನೀಡಿರುವ ಬೆನ್ನಲ್ಲೇ ಬಿಜೆಪಿ ಇನ್ನೊಬ್ಬ ಮುಖಂಡನ ಈ ಹೇಳಿಕೆಯು ಕೇಂದ್ರದಲ್ಲಿ ಬಿಜೆಪಿ ಮುಜುಗರ ಪಡುವಂತೆ ಮಾಡಿದೆ.