ಇಸ್ಲಾಮಾಬಾದ್ : ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು . ಭಾರತ ಪಾಕ್ ಸರ್ಕಾರಕ್ಕೆ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಸಲಹೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಕೆರ್ರಿ, ಇಸ್ಲಾಮಾಬಾದ್ ನಲ್ಲಿ ಮಾತನಾಡಿ, ಉಗ್ರರ ನಿಗ್ರಹದ ಹೊರತು ಪಾಕಿಸ್ತಾನದ ನೆರೆಹೊರೆಯ ದೇಶಗಳಿಗೆ ಅಪಾಯ ತಪ್ಪಿದ್ದಲ್ಲ ಲಷ್ಕರ್ ಎ ತೋಯ್ಬಾ ಸಂಘಟನೆ ಪಾಕಿಸ್ತಾನಕ್ಕೆ ಮಾತ್ರವಲ್ಲ ಅಮೆರಿಕಾಗೂ ಅಪಾಯಕಾರಿಯಾಗಿದೆ ಎಂದರು.
ಅಫ್ಘಾನಿಸ್ತಾನದಲ್ಲಿ ಅಡಗಿರುವ ಉಗ್ರರಿಂದ ತೀವ್ರ ಉಪಟಳ ಹೆಚ್ಚಿದೆ. ಉಗ್ರರ ನಿಗ್ರಹಕ್ಕೆ ಎಲ್ಲರೂ ಒಂದಾಗುವ ಅಗತ್ಯವಿದೆ. ಭಯೋತ್ಪಾದನಾ ನಿಗ್ರಹಕ್ಕೆ ಅಮೆರಿಕ ಬೆಂಬಲವಿದೆ. ಪಾಕಿಸ್ತಾನದ ಇಂತಹ ಹೋರಾಟಕ್ಕೆ ಅಮೆರಿಕ ಕೂಡ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಉಗ್ರರ ನಿಗ್ರಹದ ನಿಟ್ಟಿನಲ್ಲಿ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಿದೆ. ಉಗ್ರರ ನಿಗ್ರಹ ಹೋರಾಟದಲ್ಲಿ ಭಾರತ-ಪಾಕ್ ಜಂಟಿಯಾಗಲಿ. ಭಾರತ-ಪಾಕ್ ಜಂಟಿ ಕಾರ್ಯಾಚರಣೆ ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.
ಪಾಕ್ ಗೆ ಎಲ್ಲಾ ರೀತಿಯ ನೆರವು ನೀಡಲು ಅಮೆರಿಕ ಸಿದ್ಧ. ಭಾಂಧವ್ಯ ವೃಧಿ ಹಾದಿಯಲ್ಲಿ ಮತ್ತಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದು ಹೇಳಿದರು.
ಈ ವೇಳೆ ಪಾಕಿಸ್ತಾನದಲ್ಲಿ ಶಾಶ್ವತ ಶಾಂತಿ ನೆಲೆಸಲು ಷರೀಫ್ ಯತ್ನಿಸುತ್ತಿದ್ದಾರೆ ಎಂದು ನವಾಜ್ ಷರೀಫ್ ಅವರನ್ನು ಶ್ಲಾಘಿಸಿದ ಕೆರ್ರಿ, ಪಾಕ್ ನ ನೆರೆಹೊರೆ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲೆಂದು ಷರೀಫ್ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಭಾರತ-ಪಾಕ್ ಗಡಿಯಲ್ಲಿ ನಿರಂತರ ಫೈರಿಂಗ್ ವಿಚಾರವಾಗಿ ಮಾತನಾಡಿದ ಅವರು, ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ತಿಳಿಸಿದರು.