ಇಸ್ಲಾಮಾಬಾದ್ : 'ಮುಂಬೈ ದಾಳಿ'ಯ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯ್ಯದ್ ವಿಚಾರಗೋಷ್ಠಿಗೆ ಪಾಕಿಸ್ತಾನ ಸರ್ಕಾರವೇ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಲಾಹೋರ್ನಲ್ಲಿ ನಡೆಯಲಿರುವ ನಿಷೇಧಿತ ಜಮಾತ್ ಉದ್ ದಾವಾದ ಎರಡು ದಿನಗಳ ವಿಚಾರಗೋಷ್ಠಿಗೆ ಪಾಕಿಸ್ತಾನ ರೈಲ್ವೆಯು ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ.
ಲಾಹೋರ್ನ ಮಿನಾರ್ ಐ-ಪಾಕಿಸ್ತಾನದ ಮೈದಾನದಲ್ಲಿ ಡಿ.4ರಿಂದ ಈ ವಿಚಾರಗೋಷ್ಠಿ ನಡೆಯಲಿದೆ. ಹಫೀಜ್ ಸಯ್ಯದ್ ತಾನು ಹಮ್ಮಿಕೊಂಡಿರುವ ರ್ಯಾಲಿಗೆ ಇತ್ತೀಚೆಗಷ್ಟೇ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿತ್ತು. ಅಲ್ಲದೇ ಪಾಕ್ ಪ್ರಧಾನಿ ನವಾಜ್ ಷರೀಫ್ ಗೂ ತಾನು ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಭಾಗವಹಿಸಲು ಉಗ್ರ ಸಯ್ಯದ್ ಆಹ್ವಾನ ನೀಡಿದ್ದ.