Untitled Document
Sign Up | Login    
Dynamic website and Portals
  
November 28, 2014

ವಿಶ್ವ ವ್ಯಾಪಾರ: ಐತಿಹಾಸಿಕ ಒಪ್ಪಂದಕ್ಕೆ ಡಬ್ಲ್ಯುಟಿಒ ಸಮ್ಮತಿ

ಜಿನೇವಾ : ವಿಶ್ವ ವ್ಯಾಪಾರ ನೀತಿಗೆ ಸಂಬಂಧಿಸಿದ ಮೊದಲ ಸುಧಾರಣಾ ಕ್ರಮಗಳಿಗೆ ವಿಶ್ವ ವ್ಯಾಪಾರ ಸಂಸ್ಥೆ ಅಂಗೀಕಾರ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವ ವ್ಯಾಪಾರಕ್ಕೆ ಸಂಬಂಧಿಸಿದ ಸುಧಾರಣಾ ಕ್ರಮವೊಂದನ್ನು ಅನುಷ್ಠಾನಕ್ಕೆ ತರಲು ಡಬ್ಲ್ಯುಟಿಒಗೆ ಸಾಧ್ಯವಾಗಲಿದೆ.

ಈ ಒಪ್ಪಂದದಿಂದಾಗಿ ಸೀಮಾ ತಪಾಸಣೆಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಗಡಿ ತಪಾಸಣಾ ಪ್ರಕ್ರಿಯೆಯಲ್ಲಿ ವಿಶ್ವಾದ್ಯಂತ ಇನ್ನು ಮುಂದೆ ಏಕರೀತಿ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವುದು ಡಬ್ಲ್ಯುಟಿಒಗೆ ಸಾಧ್ಯವಾಗಲಿದೆ. ಇದು ವಿಶ್ವಾದ್ಯಂತ ವ್ಯಾಪಾರದ ಹರಿವನ್ನು ಸರಳಗೊಳಿಸಲಿದೆ. ಜತೆಗೆ, ವಿಶ್ವ ಆರ್ಥಿಕತೆಗೆ 1 ಲಕ್ಷ ಶತಕೋಟಿ ಡಾಲರ್ ಹರಿಯಲಿದ್ದು, 21 ದಶಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ.

ಈ ರೀತಿಯ ಒಪ್ಪಂದಕ್ಕಾಗಿ ಡಬ್ಲ್ಯುಟಿಒ ಸುಮಾರು 19 ವರ್ಷಗಳಿಂದ ಪ್ರಯತ್ನ ನಡೆಸುತ್ತಿತ್ತು. ಈ ಒಪ್ಪಂದ 2001ರ ದೋಹಾ ಸುತ್ತಿನ ಮಾತುಕತೆಯ ಒಂದು ಭಾಗವಷ್ಟೇ. ದೋಹ ಮಾತುಕತೆಯ ವೇಳೆಗೆ ಚರ್ಚೆಗೆ ಬಂದ ಮೂಲ ಒಪ್ಪಂದದ ಅನುಷ್ಠಾನ ಅಸಾಧ್ಯ ಎನ್ನುವ ಸ್ಥಿತಿ ಪರಿಸ್ಥಿತಿ ಇತ್ತು. ಈ ಹಿನ್ನೆಲೆಯಲ್ಲಿ ಮೂಲ ಒಪ್ಪಂದವನ್ನು ಕಿರಿದುಗೊಳಿಸಿ ನಂತರ ವಿಶ್ವ ರಾಷ್ಟ್ರಗಳ ಮುಂದಿಡಲಾಗಿತ್ತು. ಆದರೆ, ಭಾರತದ ನೇತೃತ್ವದ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಒಪ್ಪಂದ ಜಾರಿಗೆ ಬಂದರೆ ತನ್ನ ಆಹಾರ ಭದ್ರತಾ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಆರೋಪಿಸಿ ಕಳೆದ ಜುಲೈನಲ್ಲಿ ಈ ಒಪ್ಪಂದಕ್ಕೆ ಭಾರತ ವಿರೋಧ ವ್ಯಕ್ತಪಡಿಸಿತ್ತು, ಆದರೆ, ನ.13ರಂದು ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಮೂಲಕ ಡಬ್ಲ್ಯುಟಿಒನ ಈ ಮಹತ್ವದ ಒಪ್ಪಂದಕ್ಕಿದ್ದ ಅಡೆತಡೆಗಳು ನಿವಾರಣೆಯಾಗಿತ್ತು.

ಈ ಒಪ್ಪಂದ ಕುರಿತು ಇನ್ನು ಮುಂದೆ ವಿಶ್ವ ವ್ಯಾಪಾರ ಒಕ್ಕೂಟದ ದೇಶಗಳು ವೈಯಕ್ತಿಕ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಬೇಕಿದೆ. ಈ ಕಾರ್ಯ ಮುಂದಿನ ವರ್ಷದಿಂದ ಆರಂಭವಾಗಲಿದೆ. 1995ರಲ್ಲಿ ಅಸ್ವಿತ್ವಕ್ಕೆ ಬಂದ ಬಳಿಕ ಡಬ್ಲ್ಯುಟಿಒ ಸದಸ್ಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿದ ಪ್ರಮುಖ ಒಪ್ಪಂದ ಇದಾಗಿದೆ. ಆಹಾರ ಸಬ್ಸಿಡಿಗೆ ಸಂಬಂಧಿಸಿ ಈ ಒಪ್ಪಂದದಲ್ಲಿದ್ದ ಪೀಸ್ ಕ್ಲಾಸ್‌ಗೆ ಭಾರತ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಭಾರತದ ಬೇಡಿಕೆಯಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಪೀಸ್ ಕ್ಲಾಸ್ ಅನ್ನು ವಿಸ್ತರಿಸಲು ಡಬ್ಲ್ಯುಟಿಒ ಒಪ್ಪಿಕೊಂಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited