ನವದೆಹಲಿ : ಕೇಂದ್ರ ಎನ್.ಡಿ.ಎ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಾಗಿದ್ದು, ಒಟ್ಟು 22 ಜನ ಹೊಸ ಮುಖಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ರಾಷ್ಟ್ರಪತಿ ಭವನದ ದರ್ಬಾಲ್ ಹಾಲ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನುತನ ಸಚಿವರಿಗೆ ಪ್ರತಿಜ್ನಾವಿಧಿ ಬೋಧಿಸುತ್ತಿದ್ದಾರೆ. 3 ಸ್ವತಂತ್ರ ಖಾತೆ, 4 ಜನ ಕ್ಯಾಬಿನೆಟ್ ದರ್ಜೆ ಹಾಗೂ 15 ಜನ ರಾಜ್ಯದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸಿದರು.
ಮನೋಹರ್ ಪರಿಕ್ಕರ್ ದೇವರ ಹೆಸರಲ್ಲಿ, ಸುರೇಶ್ ಪ್ರಭು, ಜೆ.ಪಿ.ನಡ್ಡಾ, ಚೌದರಿ ಬಿರೇಂದರ್ ಸಿಂಗ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಮ್ ಕೃಪಾಲ್ ಯಾದವ್, ಮುಖ್ತಾರ್ ಅಬ್ಬಾಸ್ ನಖ್ವಿ, ಗಿರಿರಾಜ್ ಸಿಂಗ್, ವೈ.ಎಸ್.ಚೌದರಿ, ಹರಿಭಾಯ್ ಪಿ.ಚೌದರಿ, ಜಯಂತ್ ಸಿನ್ಹಾ, ಪ್ರೊ.ರಾಮ್ ಶಂಕರ್ ಕಟಾರಿಯಾ, ರಾಜ್ಯವರ್ಧನ್ ಸಿಂಗ್ ರಾಥೋಡ್,ಸಾದ್ವಿ ನಿರಂಜನ್ ಜ್ಯೋತಿ, ವಿಜಯ್ ಸಾಂಪ್ಲಾ, ಬಾಬುಲ್ ಸುಪ್ರಿಯೋ, ಮನೋಹರ್ ಭಾಯ್ ಕುಂಡರಿಯ, ಸನ್ವರ್ ಲಾಲ್ ಜಾಟ್, ಹನ್ಸರಾಜ್ ಅಹಿರ್ ರಾಜ್ಯ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಡಾ.ಮಹೇಶ್ ಶರ್ಮಾ, ರಾಜೀವ್ ಪ್ರತಾಪ್ ರೂಡಿ, ಬಂಡಾರು ದತ್ತಾತ್ರೆಯ ಸ್ವತಂತ್ರ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.