Untitled Document
Sign Up | Login    
Dynamic website and Portals
  
June 1, 2016

ಜಿಡಿಪಿ ದರ ಏರಿಕೆ: ಐದು ವರ್ಷಗಳಲ್ಲಿ ಅತ್ಯಧಿಕ ಬೆಳವಣಿಗೆ ದಾಖಲು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶ ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗಿದ್ದು, ದೇಶದ ಒಟ್ಟು ಆರ್ಥಿಕ ಬೆಳವಣಿಗೆ ದರ (ಜಿಡಿಪಿ) 2015–16ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ 7.9ರಷ್ಟು ಮತ್ತು ಒಟ್ಟಾರೆ ಹಣಕಾಸು ವರ್ಷದಲ್ಲಿ ಶೇ 7.6ರಷ್ಟು ಬೆಳವಣಿಗೆ ದಾಖಲಿಸಿದೆ.

ಇದು ಕಳೆದ ಐದು ವರ್ಷದಲ್ಲೇ ಅತ್ಯಧಿಕ ಜಿಡಿಪಿ ಬೆಳವಣಿಗೆಯಾಗಿದ್ದು, 2016- 17ನೇ ಸಾಲಿನಲ್ಲಿ ಶೇ.8ರ ಪ್ರಗತಿ ದರವನ್ನು ನಿರೀಕ್ಷಿಸಬಹುದಾಗಿದೆ.ಭಾರತದ ಈ ಸಾಧೆನೆಗೆ ಉತ್ಪಾದನಾ ವಲಯ ಮತ್ತು ಕೃಷಿ ರಂಗದ ಉತ್ತಮ ಸಾಧನೆಯೇ ಕಾರಣವಾಗಿದೆ ಎಂದು ಕೇಂದ್ರೀಯ ಅಂಕಿ ಅಂಶ ಕಚೇರಿ (ಸಿಎಸ್‌ಒ) ತಿಳಿಸಿದೆ.

ಸಿಎಸ್ ಒ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ 2015–16ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಗಣಿ ಮತ್ತು ಕಲ್ಲು ಗಣಿ ವಲಯವು ಶೇ 8.6, ವಿದ್ಯುತ್‌, ಅನಿಲ, ನೀರು ಪೂರೈಕೆ ಮತ್ತಿತರ ನಾಗರಿಕ ಸೇವೆಗಳು ಶೇ 9.3 ರಷ್ಟು ಬೆಳವಣಿಗೆ ದಾಖಲಿಸಿವೆ.

ದೇಶದ ಉತ್ಪಾದನಾ ವಲಯ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ 9.3 ಮತ್ತು ಕೃಷಿ ವಲಯವು ಶೇ 2.3ರಷ್ಟು ವೃದ್ಧಿ ಸಾಧಿಸಿದ್ದು, ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಏಪ್ರಿಲ್‌ – ಜೂನ್‌ ತಿಂಗಳ ತ್ರೈಮಾಸಿಕದಲ್ಲಿ ಶೇ 7.5, ಜುಲೈ-ಸೆಪ್ಟೆಂಬರ್‌ (ಶೇ 7.6), ಅಕ್ಟೋಬರ್‌-ನವೆಂಬರ್‌ನಲ್ಲಿ ಶೇ 7.2ರಷ್ಟು ವೃದ್ಧಿ ದಾಖಲಿಸಿತ್ತು ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 0.2 ಕುಸಿತ ಕಂಡಿದ್ದ ಕೃಷಿ ವಲಯವು, 2015–16ರಲ್ಲಿ ಶೇ 1.2ರಷ್ಟು ಪ್ರಗತಿ ದಾಖಲಿಸಿದೆ. ಅಂತೆಯೇ ರಾಷ್ಟ್ರೀಯ ತಲಾ ಆದಾಯ ದರ ಕೂಡ 6.2ಕ್ಕೇರುವ ಮೂಲಕ 77, 435 ರೂ.ಗಳಿಗೇರಿದೆ.

ಇದೇ ವೇಳೆ, ದೇಶದ ಜನರ ತಲಾ ಆದಾಯ ಶೇ.7.4ರಷ್ಟು ಏರಿಕೆಯಾಗಿದೆ. 2015-16ನೇ ಸಾಲಿನಲ್ಲಿ ದೇಶದ ತಲಾ ಆದಾಯ 93,293 ರೂ.ಗಳಿಗೆ ಏರಿಕೆಯಾಗಿದೆ. ಹಿಂದಿನ ವರ್ಷದಲ್ಲಿ ಇದು 86,879 ರೂ.ಇತ್ತು.

ಆರ್ ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ರುಪಾಯಿ ಮೌಲ್ಯದಲ್ಲಿಯೂ ಕೂಡ ಚೇತರಿಕೆ ಕಂಡುಬಂದಿದ್ದು, ಪ್ರಸ್ತುತ ರುಪಾಯಿ ಮೌಲ್ಯ 67.20ಗೇರಿದೆ. ವಾರ್ಷಿಕ ಆರ್ಥಿಕ ಅಭಿವೃದ್ಧಿ ಅಂಕಿಅಂಶಗಳ ಪ್ರಕಾರ 2014-15ರಲ್ಲಿ ಭಾರತದ ಜಿಡಿಪಿ ಶೇ.7.2ರಷ್ಟು ಏರಿಕೆಯಾಗಿತ್ತು. ಕ್ರಮೇಣ ತನ್ನ ಅಭಿವೃದ್ಧಿಯನ್ನು ಮುಂದುವರೆಸಿರುವ ಭಾರತ ಇದೀಗ 2015-16ರಲ್ಲಿ 7.6ಕ್ಕೇರಿಸಿಕೊಂಡಿತ್ತು. ಇದೀಗ ಬಿಡುಗಡೆಯಾಗಿರುವ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ 7.9ಕ್ಕೇರಿಕೆ ಯಾಗಿದೆ ಎಂದು ಹೇಳಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited