ಲಖ್ನೋ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಅವರ ವಾಗ್ದಾಳಿ ಮುಂದುವರೆದಿದ್ದು, ಸಂಸಾರಿಗಳ ಕಷ್ಟ ಮೋದಿಗೆ ಅರ್ಥವಾಗುವುದಿಲ್ಲ ಎಂದು ಟೀಕಿಸಿದ್ದಾರೆ
ಲಖ್ನೋದಲ್ಲಿ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕುಟುಂಬವಿಲ್ಲ. ಹೀಗಾಗಿ ಸಂಸಾರಿಗಳ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ
ನನಗೆ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಆದರೆ ನಮಗೊಬ್ಬರು ದೊರೆ (ಮೋದಿ) ಇದ್ದಾರೆ. ಅವರಿಗೆ ಈ ರೀತಿ ಕುಟುಂಬವಿಲ್ಲ. ಅವರು ಇನ್ನೊಬ್ಬರ ಕಷ್ಟವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಆಜಂ ಖಾನ್ ಹೇಳಿಕೆಗೆ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದು, ಆಜಂ ಖಾನ್ ಕಾಗೆ ಇದ್ದಂತೆ ಎಂದು ಲೇವಡಿ ಮಾಡಿದ್ದಾರೆ. ಆ ಕಾಗೆ ಯಾವ ಮರದಲ್ಲಿ ಕೂರುತ್ತೋ ಆ ಮರವೇ ಒಣಗಿ ಹೋಗುತ್ತೆ. ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಕಿಡಿಕಾರಿದ್ದಾರೆ.