ನವದೆಹಲಿ : ದಾದ್ರಿ ಪ್ರಕರಣ ರಾಜಕೀಯ ತಿರುವು ಪಡೆಯುತ್ತಿರುವ ಸಂದರ್ಭದಲ್ಲಿ, ಇನ್ನಷ್ಟು ತುಪ್ಪ ಸುರಿಯುವಂತೆ ಬಿಜೆಪಿ ಎಂಪಿ ಸಾಕ್ಷೀ ಮಹರಾಜ್ ಗೋವಿಗಾಗಿ ಸಾಯಲೂ ಸಿದ್ಧ, ಸಾಯಿಸಲೂ ಸಿದ್ಧ ಎಂದು ಹೇಳಿದ್ದಾರೆ.
ನಮ್ಮ ತಾಯಿಗೆ ಆಗುತ್ತಿರುವ ಅವಮಾನವನ್ನು ಸಹಿಸಲಾಗುವುದಿಲ್ಲ... ಸಾಯುತ್ತೇವೆ.. ಸಾಯಿಸುತ್ತೇವೆ ಎಂದು ಸಾಕ್ಷೀ ಮಾಹರಾಜ್ ಹೇಳಿದ್ದಾರೆ. ಈ ಪ್ರಕರನದಲ್ಲಿ ನಡೆಯುತ್ತಿರುವ ರಾಜಕೀಯ ಖಂಡನೀಯ ಎಂದು ಅವರು ಹೇಳಿದರು.
ಪ್ರಕರಣವನ್ನು ಉತ್ತರಪ್ರದೇಶ ಸರ್ಕಾರ ನಿರ್ವಹಣೆ ಮಾಡಿದ ರೀತಿಯ ವಿರುದ್ಧ ಹರಿಹಾಯ್ದ ಸಾಕ್ಷೀ ಮಹರಾಜ್, ಸಮಾಜವಾದಿ ಪಕ್ಷ ಡಬಲ್ ಸ್ಟಾಂಡರ್ಡ್ ಹೊಂದಿದೆ ಎಂದು ಹೇಳಿದ್ದಾರೆ.
ಅಕ್ಲಾಕ್ ಕುಟುಂಬಕ್ಕೆ 45 ಲಕ್ಷ ಪರಿಹಾರ ನೀಡಿದ್ದಕ್ಕೆ ಅಕಿಲೇಶ್ ಯಾದವ್ ಜೊತೆ ನನಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಉನ್ನಾವೋದಲ್ಲಿ ಇಬ್ಬರು ಸಹೋದರಿಯರ ಅತ್ಯಾಚಾರವಾಗಿ ಕೊಲೆಯಾದಾಗ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡಲಿಲ್ಲ ಎಂದು ತಿಳಿಸಿದರು.
ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡ ಸಾಕ್ಷೀ ಮಹಾರಾಜ್, ಆಜಂ ಖಾನ್ ಪಾಕಿಸಾನಿ, ಅವರಿಗೆ ಪಾಕಿಸ್ತಾನದ ರಾಜಕೀಯ ಶಕ್ತಿಗಳ ಮೇಲೆ ನಂಬಿಕೆ ಇದೆ ಎಂದು ಹೇಳಿದರು.