ಬೆಂಗಳೂರು : ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನವೆಂಬರ್ ಕೊನೇಯ ವಾರ ಅಥವಾ ಡಿಸೆಂಬರ್ ಮೊದಲವಾರದಲ್ಲಿ ಬೆಳಗಾವಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಕಾಗೋಡು ತಿಮ್ಮಪ್ಪನವರು ಬೆಳಗಾವಿಯ ವಿಧಾನಮಂದಲ ಅಧಿವೇಶನದ ದಿನಾಂಕ ಅಂತಿಮ ಮಾಡಲು ನನಗೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಬದ್ಧವಾಗಿದೆ ಎಂದರು.
ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದು. ಸ್ಪೀಕರ್ ಅವರು ಬೆಳಗಾವಿ ಅಧಿವೇಶನವನ್ನು 17 ದಿನಗಳ ಕಾಲ ನಡೆಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಇದರಿಂದ ವಿಧಾನಮಂಡಲ ಅಧಿವೇಶನ ಕನಿಷ್ಟ 60 ದಿನಗಳು ಪೂರೈಸಿದಂತಾಗುತ್ತದೆ ಎಂದ ಸಚಿವರು ಸರ್ಕಾರ ಬೆಳಾಗಿವಿಯಲ್ಲಿ ಅಧಿವೇಶನ ನಡೆಸುವದಕ್ಕೆ ಮೀನಮೇಷ ಎಣಿಸುತ್ತಿದೆ ಎಂಬ ವಿಪಕ್ಷದ ಆರೋಪವನ್ನು ತಳ್ಳಿಹಾಕಿದರು.