ಶ್ರೀನಗರ : ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಧಾರಾಕಾರ ಮಳೆಯಿಂದ ಉಂಟಾಗಿರುವ ಪ್ರವಹ ಪರಿಸ್ಥಿತಿಯಿಂದ ಕಾಶ್ಮೀರ ಭಾಗದ 12,00 ಗ್ರಾಮಗಳು ಜಲಾವೃತವಾಗಿದೆ. ಈ ಪೈಕಿ 400 ಹಳ್ಳಿಗಳು ಜಲಾವೃತವಾಗಿವೆ.
ಜಮ್ಮು ಭಾಗದಲ್ಲಿ 1100ಹಳ್ಳಿಗಳಲ್ಲಿ ನೀರು ತುಂಬಿಕೊಂಡಿದ್ದರೆ, ಅದರಲ್ಲಿ 300 ಗ್ರಾಮಗಳು ಸಂಪೂರ್ಣವಾಗಿ ನೀರಿನೊಳಗೆ ಸೇರಿಕೊಂಡಿವೆ. ಜಮ್ಮು-ಕಾಶ್ಮೀರದಲ್ಲಿ ಒಟ್ಟು 2300 ಹಳ್ಳಿಗಳು ಜಾವೃತಗೊಂಡಿದ್ದು, 700 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿವೆ.
ಇನ್ನು ಜಮ್ಮು-ಕಾಶ್ಮೀರ ಪ್ರವಾಹದಲ್ಲಿ ಸಿಲುಕಿರುವ 660 ಕ್ಕೂ ಹೆಚ್ಚು ಕನ್ನಡಿಗರ ಪೈಕಿ ಸುಮಾರು 400 ಮಂದಿಯನ್ನು ರಕ್ಷಿಸಲಾಗಿದ್ದು, ಕಳೆದ ಐದು ದಿನಗಳಲ್ಲಿ ಸುಮಾರು 300 ಜನರು ತಾಯ್ನಾಡಿಗೆ ಆಗಮಿಸಿದ್ದಾರೆ.
ರಾಜ್ಯದ 100ಕ್ಕೂ ಹೆಚ್ಚು ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬೆಳಿಗ್ಗೆ 15 ಜನರನ್ನು ರಕ್ಷಿಸಲಾಗಿದ್ದು, ಇವರಿಗೆ ನವದೆಹಲಿಯ ಕನ್ನಡ ಭವನದಲ್ಲಿ ಆಶ್ರಯ ನೀಡಲಾಗಿದೆ.