ಗೋರಖ್ಪುರ್ : ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದರು.
ಇದಕ್ಕೂ ಮೊದಲು ಗೋರಖ್ಪುರ ಗೋರಖ್ನಾಥ ಮಂದಿರದಲ್ಲಿ ನಿರ್ಮಿಸಿರುವ ಮಹಾಂತ ಅವೈದ್ನಾಥ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಅಡಿಗಲ್ಲು ಸಮಾರಂಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಭೋಜಪುರಿ ಭಾಷೆಯಲ್ಲಿ ಭಾಷಣದ ಮೊದಲ ಸಾಲುಗಳನ್ನು ಹೇಳಿದ ಮೋದಿಗೆ ಜನ ಹಷೋದ್ಘಾರ ಮಾಡಿದರು.
ಮಹಾಂತ ಅವೈದ್ನಾಥ್ರನ್ನು ಸ್ಮರಿಸಿದ ಮೋದಿ ರಾಜಕೀಯಕ್ಕೆ ಧುಮುಕದೆ ಜನಸೇವೆ ಮಾಡಿದ ಅಪರೂಪದ ಸಂತ ಎಂದು ಹೊಗಳಿದರು.
1990 ರಿಂದ ಬಾಗಿಲು ಮುಚ್ಚಿದ್ದ ರಸಗೊಬ್ಬರ ಕಾರ್ಖಾನೆ ಮೋದಿಯವರಿಂದ ಪುನಾರಂಭಗೊಂಡಿದೆ ಎಂದು ಸಂಸದ ಯೋಗಿ ಆದಿತ್ಯನಾಥ ಹೇಳಿದರು.