ನವದೆಹಲಿ : ಜುಲೈ 5ರಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ರಾಷ್ಟ್ರಗಳ ಭೇಟಿಯನ್ನು ಆರಂಭಿಸಲಿದ್ದು ಅದಕ್ಕೆ ಮುನ್ನ ಅಂದರೆ ಜುಲೈ 5ರಂದು ಬೆಳಿಗ್ಗೆ 11ಗಂಟೆಗೆ ಕೇಂದ್ರ ಸಚಿವ ಸಂಪುಟದ ವಿಸ್ತರಣೆ ಮಾಡಲಿದ್ದಾರೆ.
ಮೂಲಗಳ ಪ್ರಕಾರ ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ವಿಜಯ್ ಸಂಪ್ಲಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಹಾಯಕ ಸಚಿವ ನಿಹಾಲ್ ಚಾಂದ್ ಅವರನ್ನು ಸಂಪುಟದಿಂದ ಕೈಬಿಡಲಾಗುವುದು ಎನ್ನಲಾಗಿದೆ.
ಶಿವಸೇನೆಯ ಅನಿಲ್ ದೇಸಾಯಿ, ಆರ್ಪಿಐನ ರಾಮದಾಸ್ ಬಂಧು ಅಠಾವಳೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ ಸಹಸ್ರಬುದ್ಧೆ, ಬಿಜೆಪಿ ಸಂಸದ ರಾಘವ ಲಖನ್ಪಾಲ್, ಉತ್ತರಪ್ರದೇಶದ ಅಪ್ನಾ ದಳದ ಅನುಪ್ರಿಯ ಪಟೇಲ್, ಬಿಜೆಪಿ ಸಂಸದ ಅರ್ಜುನ್ ರಾಮ್ ಮೇಘವಾಲ್, ಗುಜರಾತ್ ಬಿಜೆಪಿ ನಾಯಕ ಪುರುಷೋತ್ತಮ ರೂಪಾಲ, ಬಿಜೆಪಿ ಡಾರ್ಜಿಲಿಂಗ್ ಸಂಸದ ಎಸ್ ಎಸ್ ಅಹ್ಲುವಾಲಿಯಾ ಮತ್ತು ಬಿಜೆಪಿ ಆಲ್ಮೋರಾ ಸಂಸದ ಅಜಯ್ ಟಮ್ಟಾ ಇವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.