ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಪ್ರಕಾಶ್ ಜಾವ್ಡೇಕರ್, ಎಸ್.ಎಸ್.ಅಹ್ಲುವಾಲಿಯಾ, ಫಗ್ಗಾನ್ ಸಿಂಗ್ ಕುಲಸ್ತೆ, ರಮೇಶ್ ಜಿಗಜಿಣಗಿ, ವಿಜಯ್ ಗೋಯಲ್, ರಾಮದಾಸ್ ಅಠಾವಳೆ ಸೇರಿದಂತೆ ಹಲವು ಪ್ರಮುಖರು ಪ್ರಮಾಣವಚನ ಸ್ವೀಕರಿಸಿದರು.
ಬೆಳಗ್ಗೆ 11ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನೂತನ ಸಚಿವರುಗಳುಃ
ಪ್ರಕಾಶ್ ಜಾವಡೇಕರ್ - ಸಂಪುಟ ಸಚಿವರಾಗಿ ಬಡ್ತಿ
ವಿಜಯಪುರ ಸಂಸದ ರಮೇಶ್ ಜಿಗಜಿಣಗಿ - ರಾಜ್ಯ ಖಾತೆ ಸಚಿವ
ಮಧ್ಯಪ್ರದೇಶದ ಸಂಸದ ಫಗ್ಗನ್ ಸಿಂಗ್ ಕುಲಸ್ತೆ - ರಾಜ್ಯ ಖಾತೆ ಸಚಿವ
ದಾರ್ಜಿಲಿಂಗ್ ಸಂಸದ ಎಸ್. ಎಸ್.ಅಹ್ಲುವಾಲಿಯಾ - ರಾಜ್ಯ ಖಾತೆ ಸಚಿವ
ರಾಜ್ಯಸಭಾ ಸದಸ್ಯ ವಿಜಯ್ ಗೋಯೆಲ್ - ರಾಜ್ಯ ಖಾತೆ ಸಚಿವ
ಮಹಾರಾಷ್ಟ್ರ ಆರ್ಪಿಐ ಸಂಸದ ರಾಮದಾಸ್ ಆಠವಲೆ - ರಾಜ್ಯ ಖಾತೆ ಸಚಿವ
ಅಸ್ಸಾಂನ ಸಂಸದ ರಾಜೆನ್ ಗೋಹೆನ್- ರಾಜ್ಯ ಖಾತೆ ಸಚಿವ
ಮಧ್ಯಪ್ರದೇಶದ ಸಂಸದ ಅನಿಲ್ ಮಾಧವ್ ದವೆ - ರಾಜ್ಯ ಖಾತೆ ಸಚಿವ
ಗುಜರಾತ್ನ ರಾಜ್ಯಸಭೆ ಸದಸ್ಯ ಪುರುಷೋತ್ತಮಭಾಯ್ ರೂಪಲ್ - ರಾಜ್ಯ ಖಾತೆ ಸಚಿವ
ಜಾರ್ಖಂಡ್ನ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ - ರಾಜ್ಯ ಖಾತೆ ಸಚಿವ
ರಾಜಸ್ಥಾನದ ಸಂಸದ ಅರ್ಜುನ್ ರಾಮ್ ಮೇಘವಾಲ್ - ರಾಜ್ಯ ಖಾತೆ ಸಚಿವ
ಗುಜರಾತ್ನ ದಾಹೋದ್ ಸಂಸದ ಜಸ್ವಂತ್ ಸಿಂಗ್ ಭಾಬೋರ್ - ರಾಜ್ಯ ಖಾತೆ ಸಚಿವ
ಉತ್ತರ ಪ್ರದೇಶದ ಸಂಸದ ಮಹೇಂದ್ರ ನಾಥ್ ಪಾಂಡೆ - ರಾಜ್ಯ ಖಾತೆ ಸಚಿವ
ಉತ್ತರಾಖಂಡ ಸಂಸದ ಅಜಯ್ ತಮ್ಟಾ - ರಾಜ್ಯ ಖಾತೆ ಸಚಿವ
ಉತ್ತರ ಪ್ರದೇಶದ ಸಹಾರನ್ಪುರದ ದಲಿತ ಸಂಸದೆ ಕೃಷ್ಣ ರಾಜ್ - ರಾಜ್ಯ ಖಾತೆ ಸಚಿವೆ
ಗುಜರಾತ್ನ ಸಂಸದ ಮನ್ಸುಕ್ ಮಾಂಡವ್ಯ - ರಾಜ್ಯ ಖಾತೆ ಸಚಿವ
ಉತ್ತರ ಪ್ರದೇಶದ ಸಂಸದೆ ಅನುಪ್ರಿಯಾ ಪಾಟೀಲ್ - ರಾಜ್ಯ ಖಾತೆ ಸಚಿವೆ
ರಾಜಸ್ಥಾನದ ನಾಗೌರ್ನ ಸಂಸದ ಸಿ.ಆರ್.ಚೌಧರಿ - ರಾಜ್ಯ ಖಾತೆ ಸಚಿವ
ರಾಜಸ್ಥಾನದ ಸಂಸದ ಪಿ.ಪಿ.ಚೌಧರಿ - ರಾಜ್ಯ ಖಾತೆ ಸಚಿವ
ಮಹಾರಾಷ್ಟ್ರದ ಸಂಸದ ಡಾ. ಸುಭಾಷ್ ರಾಮರಾವ್ ಭಾಮ್ರೆ - ರಾಜ್ಯ ಖಾತೆ ಸಚಿವ
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಸಚಿವರು, ಶಾಸಕರು, ವಿವಿಧ ಗಣ್ಯರು ಉಪಸ್ಥಿತರಿದ್ದರು.