Untitled Document
Sign Up | Login    
Dynamic website and Portals
  
June 14, 2016

ಬಿಜೆಪಿ ಕಾರ್ಯಕರ್ತರಿಗೆ ಸಪ್ತಸೂತ್ರಗಳನ್ನು ಬೋಧಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ಅಲಹಾಬಾದ್ : ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಸಪ್ತಸೂತ್ರಗಳನ್ನು ಬೋಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಕ್ತಾಯಗೊಂಡ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಸೂತ್ರಗಳ ಮೋದಿ ಬೋಧಿಸಿದ್ದಾರೆ.

ಸೇವಾ ಭಾವನೆ, ಸಂತುಲನ, ಸಂಯಮ, ಸಮನ್ವಯ, ಸಕಾರಾತ್ಮಕತೆ, ಸದ್ಭಾವನೆ ಮತ್ತು ಸಂವಾದ.. ಇವು ಸಪ್ತಸೂತ್ರಗಳಾಗಿದ್ದು. ಇದು ರ್ಯಕರ್ತರ ಗುಣ-ನಡತೆ, ದೇಶವನ್ನು ಹೇಗೆ ಬಲಪಡಿಸಬೇಕೆನ್ನುವ ಬಗ್ಗೆ ತಿಳಿಸುತ್ತದೆ. ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಿಜೆಪಿ ಇತ್ತೀಚೆಗೆ ಅಸ್ಸಾಂನಲ್ಲಿ ಜಯಿಸಿದೆ. ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲಿ ಮತಗಳಲ್ಲಿ ವೃದ್ಧಿಯಾಗಿದೆ. ಹೀಗಾಗಿ ಪ.ಬಂಗಾಲದಿಂದ ಕೇರಳದವರೆಗಿನ ಸಮುದ್ರತಟದ ರಾಜ್ಯಗಳಲ್ಲಿ ಪಕ್ಷ ಬಲಪಡಿಸಬೇಕು. 2019ರ ಲೋಕಸಭೆ ಚುನಾವಣೆ ಮತ್ತು ಅದರೊಳಗೆ ದೊಡ್ಡ ಜಯಗಳನ್ನು ದಾಖಲಿಸಬೇಕು' ಎಂದು ಕರೆ ನೀಡಲಾಗಿದೆ.

ದೇಶವನ್ನು ಬಲಪಡಿಸುವ ಅಗತ್ಯವಿದೆ. ಜನರು, ಕೇವಲ ಘೋಷಣೆಗಳಲ್ಲಿ ಸಮಾಧಾನ ಹೊಂದಲಾರರು. ನಮ್ಮ ದೇಶವೆಷ್ಟು ಬಲಶಾಲಿಯಾಗುತ್ತಿದೆ ಎಂಬುದರ ಬಗ್ಗೆಯೇ ಅವರು ಚಿಂತಿಸುತ್ತಾರೆ. ನಾವು ಇತಿಹಾಸ ನಿರ್ಮಾಣ ಮಾಡುತ್ತಿದ್ದೇವೆ. ಕೋಟ್ಯಂತರ ಮಂದಿ ಕಾರ್ಯಕರ್ತರು ಪಕ್ಷ ಕಟ್ಟಲು ಅವಿರತ ದುಡಿದಿದ್ದಾರೆ. ಪರಿಣಾಮ ನಾವಿಂದು ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ.

ಇದೇ ವೇಳೆ ಶಿವಾಜಿಯನ್ನು ಉದಾಹರಿಸಿರುವ ಮೋದಿ, 'ಶಿವಾಜಿ ಅಧಿಕಾರದಲ್ಲಿದ್ದರೂ ಅಧಿಕಾರದ ಹಣ್ಣನ್ನು ಸವಿಯಲಿಲ್ಲ. ಬದಲಿಗೆ ಕೆಲವರು ನ್ಯಾಯ ಬದ್ಧವಾಗಿ ಅಧಿಕಾರ ಹೊಂದಿಲ್ಲದಿದ್ದರೂ 'ಅಧಿಕಾರವೆಂಬ ಹಣ್ಣು' ತಿಂದರು' ಎಂದು ಕಾಂಗ್ರೆಸ್‌- ಗಾಂಧಿ ಕುಟುಂಬವನ್ನು ಪರೋಕ್ಷವಾಗಿ ಟೀಕಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited