ನವದೆಹಲಿ : ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳ ಸೇರಿದಂತೆ ಇನ್ನಿತರ ದೌರ್ಜನ್ಯಗಳಿಗೆ ಒಳಗಾಗಿರುವ ಪಾಕ್ ಹಿಂದುಗಳಿಗೆ ಭಾರತ ಪೌರತ್ವ ನೀಡಲು ನಿರ್ಧರಿಸಿದೆ.
ಪ್ರಸ್ತುತ ಇರುವ ಕಾನೂನಿಗೆ ಮಹತ್ವದ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪಾಕಿಸ್ತಾನದಿಂದ ವಲಸೆ ಬರುವ ಹಿಂದುಗಳಿಗೆ ಭಾರತೀಯ ಪೌರತ್ವ ಸುಲಭವಾಗಿ ಲಭ್ಯವಾಗಲಿದೆ.
ಭಾರತೀಯ ಪೌರತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದೆ. ಜುಲೈ-ಆಗಸ್ಟ್ನಲ್ಲಿ ನಡೆಯಲಿರುವ ಮುಂಗಾರು ಅಧಿವೇಶನದ ವೇಳೆ ಇದು ಸಂಸತ್ನಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ಈಗಾಗಲೇ ತಿದ್ದುಪಡಿ ಕುರಿತು ಕ್ಯಾಬಿನೆಟ್ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಈ ಮಾಸಾಂತ್ಯಕ್ಕೆ ಕರಡು ಅಂತಿಮಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಪಾಕಿಸ್ತಾನದಿಂದ ಬರುವ ಹಿಂದು ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ನಿಯಮವನ್ನು ಸರಳೀಕರಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆ ಸ೦ದರ್ಭದಲ್ಲೇ, ಪಾಕಿಸ್ತಾನದ ನಿರಾಶ್ರಿತ ಹಿ೦ದುಗಳಿಗೆ ಆಶ್ರಯ ಒದಗಿಸುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು. ಪಾಕಿಸ್ತಾನದಲ್ಲಿ ಹಿ೦ಸೆ, ದೌಜ೯ನ್ಯ ಅನುಭವಿಸುತ್ತಿರುವ ಹಿ೦ದುಗಳನ್ನು ಭಾರತ ಸ್ವಾಗತಿಸುತ್ತದೆ ಎ೦ದು ಹೇಳಿತ್ತು. ಕೇ೦ದ್ರದಲ್ಲಿ ಅಧಿಕಾರಕ್ಕೆ ಬ೦ದು 2 ವಷ೯ ಪೂರೈಸಿರುವ ಸ೦ದಭ೯ದಲ್ಲಿ ಬಿಜೆಪಿ ಈ ಭರವಸೆ ಈಡೇರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.