ನವದೆಹಲಿ : ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ಗಳಿಗೆ ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ನಡೆಸಬೇಕಾಗಿರುವ ನೀಟ್ ಪರೀಕ್ಷೆಯಿಂದ (ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ) ಒಂದು ವರ್ಷದವರೆಗೆ ವಿನಾಯ್ತಿ ನೀಡುವ ವಿಶೇಷ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.
ಸುಗ್ರೀವಾಜ್ಞೆಯ ಪ್ರಕಾರ ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಶಿಕ್ಷಣ ಮಂಡಳಿಗಳನ್ನು ನೀಟ್ ವ್ಯಾಪ್ತಿಯಿಂದ ಒಂದು ವರ್ಷದವರೆಗೆ ಹೊರಗಿಡಲಾಗುವುದು. ವೈದ್ಯಕೀಯ ಮತ್ತು ದಂತವೈದ್ಯ ಕೋರ್ಸ್ಗೆ ಸೇರುವವರು ಈ ವರ್ಷ ರಾಜ್ಯ ಸರ್ಕಾರ ನಡೆಸುವ ಸಿಇಟಿ ಮತ್ತು ದೇಶವ್ಯಾಪಿ ನಡೆಯಲಿರುವ ನೀಟ್ ಎರಡನ್ನೂ ಬರೆಯುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು.
ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಾಕಷ್ಟು ಸಮಯ ಸಿಗದ ಕಾರಣ ನೀಟ್ನ್ನು ಮುಂದೂಡಬೇಕು ಎಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು.
ಕೇಂದ್ರ ಸಚಿವ ಸಂಪುಟವು ನೀಟ್ನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿತು. ಸುಗ್ರೀವಾಜ್ಞೆಯನ್ನು ಅಂಕಿತಕ್ಕಾಗಿ ರಾಷ್ಟ್ರಪತಿವರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿದುಬಂದಿದೆ.