Untitled Document
Sign Up | Login    
Dynamic website and Portals
  
April 2, 2016

ಪರಮಾಣು ಶೃಂಗ ಸಭೆಯಲ್ಲಿ ನಾಗರಿಕ ಭದ್ರತಾ ಕ್ರಮಗಳನ್ನು ಘೋಷಿಸಿದ ಪ್ರಧಾನಿ ಮೋದಿ

ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ಟನ್ : ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ ಮತ್ತು ತಂತ್ರಜ್ನಾನದ ನಿಯೋಜನೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಕೆಲವು ಪ್ರಮುಖ ಕ್ರಮಗಳನ್ನು ಘೋಷಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ ಮುಕ್ತಾಯಗೊಂಡ 2ನೇ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ಈ ಘೋಷಣೆ ಮಾಡಿದರು. ಸುಮಾರು 50 ದೇಶಗಳ ನಾಯಕರು ಶೃಗಸಭೆಯಲ್ಲಿ ಭಾಗವಹಿಸಿದ್ದರು.

ಪರಮಾಣು ಭದ್ರತೆ ವಿಷಯದಲ್ಲಿ ತಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಮೋದಿ, ಸಂಸ್ಥೆಯ ಚೌಕಟ್ಟು, ಸ್ವತಂತ್ರ ನಿಯಂತ್ರಣ ಸಂಸ್ಥೆ ಮತ್ತು ತರಬೇತಿ ಮತ್ತು ವಿಶೇಷ ಮಾನವಶಕ್ತಿಯ ಮೂಲಕ ಪರಮಾಣು ಭದ್ರತೆ ವಿಷಯದಲ್ಲಿ ಭಾರತ ದೇಶ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಪರಮಾಣು ಭಯೋತ್ಪಾದನೆಯನ್ನು ನಾಶಪಡಿಸಲು ತಂತ್ರಜ್ಞಾನವನ್ನು ನಿಯೋಜಿಸಿ, ಅಭಿವೃದ್ಧಿಪಡಿಸುವುದು ಭಾರತದ ಯೋಜನೆಯಾಗಿದೆ. ಪರಮಾಣು ಕಳ್ಳಸಾಗಣೆಗೆ ತಡೆಯೊಡ್ಡಬೇಕಾಗಿದೆ ಎಂದು ಪ್ರಧಾನಿ ಆಶಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited