ನವದೆಹಲಿ : ಸಿಯಾಚಿನ್ನಲ್ಲಿ ಆರು ದಿನಗಳವರೆಗೆ 25 ಅಡಿಯಷ್ಟು ಹಿಮದ ಕೆಳಗೆ 40 ಡಿಗ್ರಿ ಶೀತದಲ್ಲಿ ಉಸಿರು ಹಿಡಿದುಕೊಂಡು ಪವಾಡ ಸದೃಶ ರೀತಿಯಲ್ಲಿ ಬದುಕಿದ ಧಾರವಾಡದ ವೀರ ಯೋಧ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸ್ಥಿತಿ ಚಿಂತಾಜನಕವಾಗಿದೆ.
ನವದೆಹಲಿಯ ಆರ್ ಆಂಡ್ ಆರ್ ಸೇನಾ ಆಸ್ಪತ್ರೆಯ ವೈದ್ಯರ ತಂಡ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದರೂ ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿದೆ. ಕಿಡ್ನಿ ಹಾಗೂ ಪಿತ್ತಜನಕಾಂಗ ಕಾರ್ಯ ಸ್ಥಗಿತಗೊಳಿಸಿದೆ. ಮಿದುಳು ಹಾಗೂ ಶ್ವಾಸಕೋಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತಿಲ್ಲ. ಎರಡೂ ಶ್ವಾಸಕೋಶಗಳಿಗೆ ನ್ಯುಮೋನಿಯಾ ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಡ್ನಿ ವಿಫಲವಾಗಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆಯೇ ಕಿಡ್ನಿ ದಾನ ಮಾಡಲು ಇಬ್ಬರು ಮುಂದೆ ಬಂದಿದ್ದಾರೆ. ವೀರ ಯೋಧ ಹನುಮಂತಪ್ಪ ಕೊಪ್ಪದ್ ಬಹುಬೇಗನೆ ಚೇತರಿಸಿಕೊಳ್ಳಲಿ ಎಂದು ಇಡೀ ದೇಶವೇ ಪ್ರಾರ್ಥನೆಯಲ್ಲಿ ತೊಡಗಿದೆ. ಅನೇಕ ಕಡೆ ಹೋಮ ಹವನಗಳನ್ನು ನಡೆಸಲಾಗಿತ್ತಿದೆ. ವೀರಯೋಧನಿಗಾಗಿ ಹನುಮಾನ್ ಚಾಳಿಸ್ ಪಠಣ, ಮೃತ್ಯುಂಜಯ ಜಪಗಳೂ ನಡೆಯುತ್ತಿವೆ.