ನವದೆಹಲಿ : ಇದು ಪ್ರಕೃತಿಯ ಪವಾಡವೋ ಅಥವಾ ವ್ಯಕ್ತಿಯ ಇಚ್ಛಾಶಕ್ತಿಯೋ, ಹಿಮಪಾತದ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ಸೇನೆಯ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪಾದ್ ಅವರನ್ನು ಸಿಯಾಚಿನ್ ರಕ್ಷಣಾ ತಂಡ ಸೋಮವಾರ ಜೀವಂತವಾಗಿ ಹೊರ ತೆಗಿದ್ದಾರೆ.
25 ಅಡಿ ಆಳದ ಹಿಮದಲ್ಲಿ ಹೂತುಹೋಗಿದ್ದ, ಸುಮಾರು ಮೈನಸ್ 40 ಡಿಗ್ರಿ ತಾಪಮಾನದ ನಡುವೆ ಇದ್ದ ಹನುಮಂತಪ್ಪ ಅವರನ್ನು ರಕ್ಷಿಸಲಾಗಿದೆ. ಆರು ದಿನಗಳ ಹಿಂದೆ ಸಿಯಾಚಿನ್ ನಲ್ಲಿ ಕಣ್ಮರೆಯಾಗಿದ್ದ 10 ಜನ ಯೋಧರಲ್ಲಿ ಹನುಮಂತಪ್ಪ ಕೂಡ ಒಬ್ಬರಾಗಿದ್ದರು. ಪವಾಡ ಸದೃಶವಾಗಿ ಹನುಮಂತಪ್ಪ ಬದುಕುಳಿದಿದ್ದಾರೆ.
ಹನುಮಂತಪ್ಪ ಅವರ್ ಸ್ಥಿತಿ ಗಂಬೀರವಾಗಿದ್ದು ಅವರನ್ನು ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಗಿದ್ದು ವಾಯುಪಡೆಯ ಆರ್.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ರಕ್ಷಣಾ ತಂಡವು ನಾಲ್ವರು ಯೋಧರ ಮೃತ ದೇಹವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದು, ಉಳಿದ ಐವರ ಬಗ್ಗೆ ಸುಳಿವು ಸಿಕ್ಕಿಲ್ಲ.
ಹನುಮಂತಪ್ಪ ಅವರು ಕನ್ನಡಿಗರಾಗಿದ್ದು, ಧಾರವಾಡ ಜಿಲ್ಲೆಯವರು.
ಕಳೆದ ಬುಧವಾರದ ಭೀಕರ ಹಿಮಪಾತದಲ್ಲಿ 10 ಜನ ಯೋಧರು ಕಾಣೆಯಾಗಿದ್ದಾರೆಂದು ವರದಿಯಾಗಿತ್ತು.