ನವದೆಹಲಿ : ಸಮ-ಬೆಸ ಕಾರಿನ ಪ್ರಯೋಗಿಕ ಸಂಚಾರ ಮುಕ್ತಾಯವಾದ ಹಿನ್ನಲೆಯಲ್ಲಿ ದೆಹಲಿ ಸರ್ಕಾರ ಭಾನುವಾರ ಏರ್ಪಡಿಸಿದ್ದ ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬಳು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಖಕ್ಕೆ ಮಸಿ ಎರಚಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ವೇದಿಕೆಯವರೆಗೆ ಹೋದ ಮಹಿಳೆಯೊಬ್ಬಳು ಮಸಿ ಎರಚಿದಳೆಂದು ತಿಳಿದು ಬಂದಿದೆ. ಕೆಲವು ಹನಿಗಳು ಅರವಿಂದ ಕೇಜ್ರಿವಾಲ್ ಮುಖಕ್ಕೆ ಬಿದ್ದಿವೆ. ವೇದಿಕೆಯವರೆಗೆ ಮಹಿಳೆಗೆ ಹೋಗಲು ಬಿಟ್ಟ ಇದೊಂದು ಭದ್ರತಾ ವೈಫಲ್ಯ ಎನ್ನಲಾಗಿದೆ.
ಮಹಿಳೆಯನ್ನು ಹಿಡಿಯಲು ಹೊರಟ ಭದ್ರತಾ ಸಿಬ್ಬಂದಿಗಳಿಗೆ ಕೇಜ್ರಿವಾಲ್, ಅವರನ್ನು ಬಿಡಿ, ಹೋಗಲಿ, ಯಾವಾಗ ದೆಹಲಿಯಲ್ಲಿ ಉತ್ತಮ ಕೆಲಸವಾದರೆ ಈ ರೀತಿಯಾಗುತ್ತದೆ ಎಂದು ಹೇಳಿದರು.