ನವದೆಹಲಿ : ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಭಾಗವಹಿಸಲು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ಗೆ ತೆರಳಿದರು. ಜಾಗತಿಕ ತಾಪಮಾನದ ಕುರಿತು ಮಾತನಾಡುವುದು ಎಲ್ಲರ ಕರ್ತವ್ಯ ಎಂದು ಒತ್ತಿ ಹೇಳಿದರು.
ಪ್ಯಾರಿಸ್ ಗೆ ಹೊರಡುವ ಮೊದಲು ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಹವಾಮಾನ ಬದಲಾವಣೆಯ ಕುರಿತು ಇಡೀ ವಿಶ್ವವೇ ಚಿಂತೆಗೆ ಒಳಗಾಗಿದೆ. ಎಲ್ಲಾ ಕಡೆ ಈ ಕುರಿತು ಚರ್ಚೆ ನಡೆಯುತ್ತಿದೆ ಮತ್ತು ಎಲ್ಲರೂ ಕಳವಳ ವ್ಯಕ್ತಪಡಿಸುತ್ತ ಇದ್ದಾರೆ. ಭೂಮಿಯ ತಾಪಮಾನ ಈಗ ಹೆಚ್ಚಿ ಬಾರದು. ಇದು ಎಲ್ಲಾ ಜವಾಬ್ದಾರಿ ಮತ್ತು ಕಾಳಜಿ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಯಾಗುತ್ತಿರುವ ಭಾರತದಂತಹ ದೇಶಗಳ ಮೇಲೆ ಹವಾಮಾನ ಬದಲಾವಣೆಯ ವಿರುದ್ಧ ಹೋರಾಟಕ್ಕೆ ಹೆಚ್ಚು ಜವಾಬ್ದಾರಿ ಕೊಡುತ್ತಿರುವುದರಿಂದ ಪ್ರಧಾನಿ ಅವರ ಜಾಗತಿಕ ತಾಪಮಾನದ ಕುರಿತು ಮಾತನಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿರುವುದು ಮಹತ್ವ ಪಡೆದಿದೆ.