ನವದೆಹಲಿ : ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಭಾಷೆಗೂ, ನಟ ಶಾರುಖ್ ಖಾನ್ ಭಾಷೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದ್ದಾರೆ.
ಬಹುಸಂಖ್ಯಾತ ಹಿಂದೂಗಳು ಶಾರುಖ್ ಖಾನ್ ಸಿನಿಮಾ ನೋಡದಿದ್ದರೆ, ಶಾರುಖ್ ಖಾನ್ ಬೀದಿಗೆ ಬರಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಅದೇ ರೀತಿ ಉಗ್ರ ಹಫೀಜ್ ಸಯೀದ್ ಬಳಸುವ ಭಾಷೆಗೂ, ಶಾರುಖ್ ಖಾನ್ ಬಳಸುವ ಭಾಷೆಗೂ ಯಾವ ವ್ಯತ್ಯಾಸವೂ ಇಲ್ಲ ಎಂದು ಯೋಗಿ ವಾಗ್ದಾಳಿ ನಡೆಸಿದ್ದಾರೆ.
ಶಾರುಖ್ ಖಾನ್ ಕುರಿತು ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿದ್ದ ವಿಜಯವರ್ಗಿಯ ವಿರುದ್ಧ ಪಕ್ಷದ ಹಾಗೂ ಇನ್ನಿತರ ಜನರು ತೀವ್ರವಾಗಿ ಟೀಕಿಸಿ, ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಶಾರುಖ್ ವಿರೋಧಿ ಟ್ವೀಟ್ ಅನ್ನು ಹಿಂಪಡೆದಿದ್ದರು.
ಶಾರುಖ್ ಖಾನ್ ಇರೋದು ಭಾರತದಲ್ಲಿ, ಆದರೆ ಅವರ ಹೃದಯವಿರುವುದು ಪಾಕಿಸ್ತಾನದಲ್ಲಿ. ಶಾರುಖ್ ಸಿನಿಮಾ ಭಾರತದಲ್ಲಿ ಕೋಟ್ಯಂತರ ರೂಪಾಯಿ ಗಳಿಸುತ್ತಿದೆ. ಆದರೆ ಅವರಿಗೆ ಭಾರತದಲ್ಲಿ ಅಸಹಿಷ್ಣುತೆ ಇದೆ ಅಂತೆ ಎಂದು ವಿಜಯ್ ವರ್ಗೀಯ ಟ್ವೀಟ್ ಮಾಡಿದ್ದರು.