ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಅಂಗಾಂಗ ದಾನದ ಪ್ರಾಮುಖ್ಯತೆಯನ್ನು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳುಃ
* ಇಂದು ಭಾರತ ಮತ್ತು ಸೌತ್ ಆಫ್ರಿಕಾ ದೇಶಗಳು ೫ ನೇ ಒಂದು ದಿನದ ಕ್ರಿಕೆಟ್ ಪಂದವನ್ನಾಡುತ್ತಿದ್ದಾರೆ. ಎರಡೂ ದೇಶಗಳು ತಲಾ ೨ ಪಂದ್ಯಗಳನ್ನು ಗೆದ್ದಿದ್ದಾರೆ. ಆದ್ದರಿಂದ ಇಂದಿನ ಪಂದ್ಯ ತುಂಬಾ ಕುತೂಹಲಕಾರಿಯಾಗಿದೆ. ನನ್ನ ಶುಭ ಹಾರೈಕೆಗಳು.
* ಅಂಗಾಂಗ ದಾನದ ತುಂಬಾ ಮುಖ್ಯವಾದ ವಿಷಯ. ಹಾರ್ಟ್, ಕಿಡ್ನಿ ಮತ್ತು ಲಿವರ್ ಗೆ ತುಂಬಾ ಬೇಡಿಕೆ ಇದೆ. ಆದರೆ ತುಂಬಾ ಕಡಿಮೆ ಅಂಗಾಂಗ ಕಸಿ ಆಗುತ್ತದೆ.
* ಇದು ಹಬ್ಬಗಳ ಕಾಲ. ಇದರಲ್ಲಿ ಇನ್ನೊಂದು ಹಬ್ಬವೆಂದರೆ ಭಾರತ ಆಫ್ರಿಕಾ ಶೃಂಗಸಭೆ.
* ನಾವು ಇನ್ನು ಕೆಲವೇ ವಾರಗಳಲ್ಲಿ ಎಲ್ಲರಿಗೂ ಆರ್ಥಿಕ ರಕ್ಷಣೆ ಸಿಗುವಂತಹ ಚಿನ್ನ ನಗದೀಕರಣ (Gold Monetisation) ಯೋಜನೆಯನ್ನು ಜಾರಿಗೊಳಿಸುತ್ತೇವೆ.
* ನಾವು ಅಶೋಕ ಚಕ್ರವಿರುವ ಚಿನ್ನದ ನಾಣ್ಯವನ್ನು ಹೊರತರುತ್ತಿದ್ದೇವೆ.
* ಸರ್ಕಾರಿ ಉದ್ಯೋಗ ಪಡೆಯಲು ನಡೆಯುತ್ತಿರುವ ಭೃಷ್ಟಾಚಾರದ ಬಗ್ಗೆ ಮಾತನಾಡಿದ ಅವರು, ಕೆಲವು ಉದೋಗಗಳಿಗೆ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಾವು ಯೋಚಿಸಿದ್ದೇವೆ. ಕೆಳದರ್ಜೆಯ ಉದ್ಯೋಗಗಳಿಗೆ ನಡೆಯುವ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಇದು ಜನವರಿ ೧, ೨೦೧೬ ರಿಂದ ಜಾರಿಗೆ ಬರಲಿದೆ.
* ಮನ್ ಕಿ ಬಾತ್ ನಲ್ಲಿ ನಾನು ಸ್ವಚ್ಛತೆಯ ಬಗ್ಗೆ ಮಾತನಾಡದೇ ಇರಲು ಹೇಗೆ ಸಾಧ್ಯ. ಸ್ವಚ್ಛ ಭಾರತಕ್ಕಾಗಿ ಮಾಧ್ಯಮಗಳು ಮಾಡುತ್ತಿರುವ ಪ್ರಯತ್ನಕ್ಕಾಗಿ ನಾನು ಮಾಧ್ಯಮದವರಿಗೆ ಧನ್ಯವಾದ ತಿಳಿಸುತ್ತೇನೆ.