Yeshwanthpur : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೋರ್ವರ ಹೃದಯವನ್ನು ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಜೀವಂತವಾಗಿ ಬೇರ್ಪಡಿಸಿದ್ದು ಚೆನ್ನೈ ಗೆ ರವಾನಿಸಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದ ಅಪರೂಪದ ಇತಿಹಾಸಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ.
ಸೆ.2ರಂದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯ ಮೆದಳು ನಿಷ್ಕ್ರೀಯವಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಮಹಿಳೆಯ ಅಂಗಾಂಗ ದಾನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚೆನ್ನೈ ನ ಫೋರ್ಟೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರಿಗೆ ಹೃದಯ ಕಸಿ (ಟ್ರ್ಯಾನ್ಸ್ ಪ್ಲ್ಯಾಂಟ್) ಮಾಡುವ ಅವಶ್ಯಕತೆ ಇದೆ. ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ದೇಹದಿಂದ ಜೀವಂತ ಹೃದಯವನ್ನು ಬೇರ್ಪಡಿಸಿದ ಬಿಜಿಎಸ್ ವೈದ್ಯರು ವಿಶೇಷ ಪೆಟ್ಟಿಗೆಯಲ್ಲಿಟ್ಟು ಚೆನ್ನೈ ಗೆ ರವಾನೆ ಮಾಡಿದ್ದಾರೆ. ಜೀವಂತ ಹೃದಯವಿರುವ ಪೆಟ್ಟಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು ಕೆಲವೇ ಕ್ಷಣಗಳಲ್ಲಿ ಚೆನ್ನೈ ತಲುಪಲಿದೆ.
ಮಹಿಳೆಯ ದೇಹದಿಂದ ಬೇಪಡಿಸಿರುವ ಹೃದಯಕ್ಕೆ 6 ಗಂಟೆಗಳವರೆಗೆ ಜೀವವಿರುತ್ತದೆ. ನಿಗದಿತ ಸಮಯದೊಳಗೆ ಹೃದಯವನ್ನು ಕಸಿಮಾಡಿದರೆ ದೇಹದಿಂದ ಬೇರ್ಪಟ್ಟಿದ್ದ ಹೃದಯ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಹೃದಯವಿರುವ ಪೆಟ್ಟಿಗೆಯನ್ನು ಕಡಿಮೆ ಸಮಯದಲ್ಲಿ ಚೆನ್ನೈಗೆ ತಲುಪಿಸುವ ಉದ್ದೇಶದಿಂದ ಕೆಂಗೇರಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಸಿಗ್ನಲ್ ಫ್ರೀ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಚೆನ್ನೈ ವಿಮಾನ ನಿಲ್ದಾಣದಿಂದ ಪೋರ್ಟಿಸ್ ಆಸ್ಪತ್ರೆ 13 ಕಿ.ಮೀ.ದೂರದಲ್ಲಿದೆ. ಅಲ್ಲಿ ಸಹ ಹೃದಯ ಜೋಡಿಸುವ ಶಸ್ತ್ರ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.