ನವದೆಹಲಿ : ನೇತಾಜಿ ಸುಭಾಷಚಂದ್ರ ಬೋಸ್ ಅವರ ನಿಗೂಢ ಸಾವಿನ ರಹಸ್ಯವನ್ನು ಬಯಲು ಮಾಡಬಲ್ಲ ಕಡತಗಳನ್ನು ಬಹಿರಂಗಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಬುಧವಾರ ನೇತಾಜಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು, ನೇತಾಜಿ ಅವರಿಗೆ ಸಂಬಂಧಪಟ್ಟ ಕಡತಗಳನ್ನು ಅವರ ಜನ್ಮದಿನವಾದ ಜನವರಿ 23, 2016ರಿಂದ ಬಹಿರಂಗಗೊಳಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಘೋಷಿಸಿದರು.
ಇತಿಹಾಸದ ಕತ್ತು ಹಿಸಕುವ ಅಗತ್ಯವಿಲ್ಲ. ಇತಿಹಾಸವನ್ನು ಮರೆತ ರಾಷ್ಟ್ರಗಳಿಗೆ ಇತಿಹಾಸ ಸೃಷ್ಟಿಸುವ ಕೊರತೆ ಇರುತ್ತದೆ. ನಾನು ಸುಭಾಷ ಬಾಬು ಕುತುಂಬದವರಿಗೆ ನನ್ನನ್ನು ನಿಮ್ಮ ಕುಟುಂಬ ಸದಸ್ಯ ಎಂದು ತಿಳಿಯಿರಿ ಎಂದು ಹೇಳಿದ್ದೇನೆ. ಅವರು ತಮ್ಮ ಸಲಹೆಗಲನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿದೇಶದ ಸರ್ಕಾರಗಳಿಗೂ ಅವರ ಹತ್ತಿರವಿರುವ ಕಡತಗಳನ್ನು ಬಿರಂಗಗೊಳಿಸಲು ಹೇಳುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ನೇತಾಜಿ ಕುಟುಂಬದವರಿಗೆ ತಿಳಿಸಿದ್ದಾರೆ. ಅದಲ್ಲದೇ, ತಾವು ವಿದೇಶಿ ಮುಖಂಡರನ್ನು ಭೇಟಿ ಆದಾಗ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಭೇಟಿಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತ ಪ್ರಧಾನಿ ನರೇಂದ್ರ ಮೋದಿ ಅವರು, ಸುಭಾಷ್ ಬಾಬು ಕುಟುಂಬ ಸದಸ್ಯರನ್ನು ಸ್ವಾಗತಿಸುವುದು ನನ್ನ ಭಾಗ್ಯ ಆಗಿತ್ತು, ನಾವು ಪರಸ್ಪರ ಗಮನಾರ್ಹ ಮತ್ತು ವ್ಯಾಪಕ ಚರ್ಚೆ ನಡೆಸಿದೆವು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ್ ಜೊತೆ ಇದೊಂದು ತುಂಬಾ ಧನಾತ್ಮಕ, ಉತ್ತಮ ಭೇಟಿಯಾಗಿತ್ತು ನೇತಾಜಿ ಅವರ್ ಸೋದರಳಿಯ ಅರ್ಧೆಂದು ಬೋಸ್ ತಿಳಿಸಿದ್ದಾರೆ.
ಇಂದು ಭಾರತದ ಸ್ವಾತಂತ್ರ್ಯ ದಿನ ಎಂದು ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಪ್ರತಿಕ್ರಿಯಿಸಿದರು.
1845 ರಲ್ಲಿ ನಿಗೂಢವಾಗಿ ಕಣ್ಮರೆಯಾದ ಸುಭಾಷಚಂದ್ರ ಬೋಸ್ ಅವರ ವಿಷಯ ಕಡತಗಲನ್ನು ಬಹಿರಂಗಗೊಳಿಸಿದರೆ ಗೊತ್ತಾಗಬಹುದೆಂಬ ಆಸೆಯಿಂದ ಈಗ ತುಂಬಾ ವರ್ಷಗಳಿಂದ ನೇತಾಜಿ ಕುಟುಂಬ ಮತ್ತು ಇತರರಿಂದ ನೇತಾಜಿಗೆ ಸಂಬಂಧಪಟ್ಟ ಕಡತಗಳನ್ನು ಬಹಿರಂಗಗೊಳಿಸಬೇಕು ಎಂಬ ಬೇಡಿಕೆ ಇತ್ತು.
ಈ ಭೇಟಿಯ ಸಂದರ್ಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜನಾಥ ಸಿಂಗ್ ಹಾಜರಿದ್ದರು.