ಬೆಂಗಳೂರು : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಎರಡು ದಿನಗಳ ಕರ್ನಾಟಕ ರಾಜ್ಯ ಪ್ರವಾಸಕ್ಕಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಶುಕ್ರವಾರ, ಶನಿವಾರ ಎರಡು ದಿನಗಳ ತಮ್ಮ ಈ ರಾಜ್ಯ ಪ್ರವಾಸದಲ್ಲಿ ಬೆಂಗಳೂರು, ಮಂಡ್ಯ ಹಾಗೂ ಹಾವೇರಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲಿದ್ದಾರೆ.
ರಾಹುಲ್ ಪ್ರವಾಸ ವೇಳಾಪಟ್ಟಿ
ಶುಕ್ರವಾರ
* ಬೆಳಗ್ಗೆ 9.45ಕ್ಕೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ.
* 10.30ಕ್ಕೆ ಹೆಲಿಕಾಪ್ಟರ್ ಮೂಲಕ ಮಂಡ್ಯದ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಫಾರ್ಮ್ ಗೆ ಪ್ರಯಾಣ.
* 11 ಗಂಟೆವರೆಗೆ ಡೀನ್ ಚೇಂಬರ್ನಲ್ಲಿ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ವಿವಿಧ
ಇಲಾಖಾ ಸಚಿವರುಗಳೊಂದಿಗೆ ಸಭೆ.
* 11 ರಿಂದ ಜಿಲ್ಲೆಯ ಪಣಕನಹಳ್ಳಿ ಹಾಗೂ ಕೊತ್ತತ್ತಿ ಗ್ರಾಮಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಮನೆಗಳಿಗೆ ಭೇಟಿ-ಸಾಂತ್ವನ.
* ಮಧ್ಯಾಹ್ನ 12.30ರಿಂದ 1 ಗಂಟೆವರೆಗೆ ಸುಮಾರು 200 ರೈತರೊಂದಿಗೆ ವಿ.ಸಿ.
ಫಾರ್ಮ್ ನಲ್ಲಿ ಸಂವಾದ.
* 2.30ಕ್ಕೆ ಬೆಂಗಳೂರಿಗೆ ವಾಪಸ್, ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುವ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಭಾಗಿ.
* 3.30ಕ್ಕೆ ಅರಮನೆ ಮೈದಾನದಲ್ಲಿ ಕೆಪಿಸಿಸಿ ಕಾರ್ಯಕಾರಿ ಸಭೆ, ಪಕ್ಷದ ಮುಂಚೂಣಿ
ಘಟಕಗಳ ಸಭೆ.
* 4.30ಕ್ಕೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ರಾಜ್ಯದಲ್ಲಿ ಸ್ಥಾಪಿತವಾಗಿರುವ
ಹೊಸ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಭೆ.
* 5 ಗಂಟೆಗೆ ಕೆಪಿಸಿಸಿ ಎಸ್ಸಿ ಘಟಕದ ಪದಾಧಿಕಾರಿಗಳೊಂದಿಗೆ ಡಾ.ಬಿ.ಆರ್.ಅಬೇಡ್ಕರ್ ಅವರ 125ನೇ ಹುಟ್ಟುಹಬ್ಬ ಆಚರಣೆ ಕುರಿತು ಚರ್ಚೆ.
* ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ
ಶನಿವಾರ
* ಬೆಳಗ್ಗೆ 7.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಪ್ರಯಾಣ.
* 8.45ಕ್ಕೆ ಬಳ್ಳಾರಿಯ ಜಿಂದಾಲ್ ವಾಯುನೆಲೆಗೆ ಆಗಮನ.
* 9.25ಕ್ಕೆ ಹೆಲಿಕಾಪ್ಟರ್ ಮೂಲಕ ರಾಣಿಬೆನ್ನೂರಿಗೆ ಭೇಟಿ, ರೈತರಿಂದ ಕಳಸಾ- ಬಂಡೂರಿ
ಯೋಜನೆ ಕುರಿತು ಮನವಿ ಸ್ವೀಕಾರ.
* 10 ಗಂಟೆಗೆ ರಸ್ತೆ ಮಾರ್ಗವಾಗಿ ರಾಣಿಬೆನ್ನೂರು ತಾಲ್ಲೂಕಿನ ಮೈದೂರು ಮತ್ತು ಗುಡಗೂರು ಗ್ರಾಮಗಳಿಗೆ ಪಾದಯಾತ್ರೆ. ಆತ್ಮಹತ್ಯೆಗೆ ಶರಣಾದ ಅಲ್ಲಿನ ರೈತರ ಮನೆಗಳಿಗೆ ಭೇಟಿ. ರೈತರು ಮತ್ತು ಮಹಿಳಾ ಕಾರ್ಯಕರ್ತರೊಂದಿಗೆ ಸಂವಾದ.
* ಮಧ್ಯಾಹ್ನ 2 ಗಂಟೆವರೆಗೆ ತಾಂಡಾ ಗ್ರಾಮದ 500ಕ್ಕೂ ಲಂಬಾಣಿ ಮಹಿಳೆಯರೊಂದಿಗೆ
ಸಂವಾದ.
* 2.30ಕ್ಕೆ ಜಿಂದಾಲ್ ವಾಯುನೆಲೆಗೆ ವಾಪಸ್.
* ಸಂಜೆ 5 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ
ಮೂಲಕ ದೆಹಲಿಗೆ ವಾಪಸ್.