ಬೋಧ್ ಗಯಾ : ಕಳೆದ ಮೂರು ದಿನಗಳಿಂದ ಬಿಹಾರದ ಬೋಧ್ ಗಯಾದಲ್ಲಿ ನಡೆಯುತ್ತಿದ್ದ ವಿಶ್ವ ಹಿಂದು-ಬೌದ್ಧ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಶನಿವಾರ, ಅ.5ರಂದು ಪ್ರಧಾನಿ ನರೇಂದ್ರ ಮೋದಿಯವರು ಬೋಧ್ ಗಯಾಕ್ಕೆ ಭೇಟಿ ನೀಡಿದರು.
ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಪಂಡಿತ್ ನೆಹರು ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಇಲ್ಲಿಗೆ ಭೇಟಿ ನೀಡುವ ಸೌಭಾಗ್ಯ ದೊರೆತಿದೆ' ಎಂದರು.
'ಶ್ರೀಕೃಷ್ಣ ಹಾಗೂ ಗೌತಮ ಬುದ್ಧರಿಬ್ಬರೂ ಅತ್ಯಂತ ಶ್ರೇಷ್ಠ ಗುರುಗಳಾಗಿದ್ದರು. ಇವರಿಬ್ಬರೂ ನೈತಿಕತೆಗೆ ಪ್ರಾಶಸ್ತ್ಯ ಕೊಟ್ಟವರು'. ಬೋಧ್ ಗಯಾವನ್ನು ಬೌದ್ಧ ಪ್ರಪಂಚದ ಆಧ್ಯಾತ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ನಾನು ಬಯಸುತ್ತೇನೆ' ಎಂದು ಪ್ರಧಾನಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಎರಡನೇ ಅಶೋಕ ಎಂದು ಹೋಲಿಸಲಾಯಿತು.
ಗೌತಮ್ ಬುದ್ಧನಿಗೆ ಜ್ನಾನೋದಯವಾದ ಸ್ಥಳ ಬೋಧ್ ಗಯಾವಾಗಿದೆ. ನೆಹರು 1954ರಲ್ಲಿ ಮತ್ತು ವಾಜಪೇಯಿ 1999ರಲ್ಲಿ ಇಲ್ಲಿಗೆ ಭೇತಿ ನೀದಿದ್ದರು. ನರೇಂದ್ರ ಮೋದಿ ಬೋಧ್ ಗಯಾಕ್ಕೆ ಭೇತಿ ನೀಡಿದ ಮೂರನೇ ಪ್ರಧಾನಿಯಾಗಿದ್ದಾರೆ.
ಪ್ರಧಾನಿ ಮೋದಿ ಬೋಧಿ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದರು. ನೇಪಾಳದಲ್ಲಿರುವ ಲುಂಬಿನಿಯಲ್ಲಿ ಹುಟ್ಟಿದ್ದ ಗೌತಮ ಬುದ್ಧ (ಪೂರ್ವ ಹೆಸರು ಸಿದ್ದಾರ್ಥ) ಕ್ರಿಸ್ತಪೂರ್ವ 563ರಲ್ಲಿ ಬೋಧ್ ಗಯಾಕ್ಕೆ ಬಂದು ಇದೇ ಬೋಧಿ ವೃಕ್ಷದ ಕೆಳಗೆ ಕುಳಿತು ಆರು ವರ್ಷಗಳ ಧ್ಯಾನ ಮಾಡಿ ಜ್ನಾನೋದಯ ಪಡೆದುಕೊಂಡಿದ್ದನು.
ಇದಕ್ಕೆ ಮೊದಲು ಬೌದ್ಧರ ಧರ್ಮ ಗುರು ದಲೈಲಾಮ ಅವರು ಪ್ರಧಾನಿ ಮೋದಿಯವರನ್ನು ಹಾರ್ಧಿಕವಾಗಿ ಸ್ವಾಗತಿಸಿದರು.
ಪ್ರಧಾನಿ ಭೇಟಿಯ ಹಿನ್ನಲೆಯಲ್ಲಿ ಬೋಧ್ ಗಯಾದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.