ಬೆಂಗಳೂರು : ಈ ವರ್ಷದ ವರುಣನ ಮುಂಗೋಪಕ್ಕೆ ಚಿನ್ನದಂತ ಬೆಳೆ ಬೆಳೆಯುವ ರೈತ ಮೃತ್ಯು ಕೂಪಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ.
ಕಲಬುರ್ಗಿಯ ಸೇಡಂನ ಯಡಹಳ್ಳಿಯ ರೈತ (60) ,ರಾಯಚೂರಿ ಸಿಂಧನೂರಿನ ಶ್ರೀನಿವಾಸ ದುರ್ಗಾ (30) ಮತ್ತು ಮಂಡ್ಯ ಜಿಲ್ಲೆಯ ದೊಡ್ಡತರಹಳ್ಳಿ ಪ್ರದೀಪ್ ಮತ್ತು ಮೈಸೂರು ಜಿಲ್ಲೆಯ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯ ಮೂಲದ ಪ್ರದೀಪ್ ವ್ಯವಸಾಯಕ್ಕೆಂದು ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿ ಮೂರು ದಿನಗಳ ಹಿಂದೆ ವಿಷ ಸೇವಿಸಿ ಇಂದು ಚಿಕಿತ್ಸೆ ಫಲಕಾರಿಯಾಗಿದ್ದಾರೆ ಮೃತಪಟ್ಟಿದ್ದಾರೆ. ಶ್ರೀನಿವಾಶ ದುರ್ಗಾ ಎಂಬುವರು 10 ಲಕ್ಷ ರೂ ಸಾಲವನ್ನು ತೀರಿಸಲಾಗದೆ ತಮ್ಮ ಜಮೀನಿನಲ್ಲೇ ವಿಷ ಸೇವಿಸಿದ್ದಾರೆ. ಇನ್ನೂ ಉಳಿದ ಇಬ್ಬರು ರೈತರು ಅಕಾಲಿಕ ಮಳೆ, ಬೆಳೆ ನಾಶಕ್ಕೆ ಬೇಸತ್ತು ಜೀವವನ್ನೇ ತೆತ್ತಿದ್ದಾರೆ.