ನವದೆಹಲಿ : 4 ದಿನದ ವಿಳಂಬದ ಬಳಿಕ ಕೇರಳಕ್ಕೆ ಮುಂಗಾರು ಪ್ರವೇಶಿಸಿದೆ. ಮುಂಗಾರು ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಪ್ರಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮುನ್ನುಗ್ಗಲು ಪೂರಕ ವಾತಾವರಣವಿದೆ. ಕರ್ನಾಟಕ, ತಮಿಳುನಾಡಿನ ಕೆಲ ಭಾಗ, ರಾಯಲ ಸೀಮೆ ಮತ್ತು ಆಂಧ್ರಪ್ರದೇಶದ ಕರಾವಳಿ, ಈಶಾನ್ಯ ಭಾರತಕ್ಕೆ ವ್ಯಾಪಿಸಲಿದೆ. ನೈಋತ್ಯ ಮುಂಗಾರು ಬಲಗೊಳ್ಳುವುವಕ್ಕೆ ತಕ್ಕನಾದ ಸ್ಥಿತಿ ಅರಬ್ಬೀ ಸಮುದ್ರದಲ್ಲಿ ನಿರ್ಮಾಣವಾಗಿದೆ ಎಂದು ಇಲಾಖೆ ಹೇಳಿದೆ.
ಈ ಹಿಂದೆ ಮೇ 30 ರಂದು ಕೇರಳಕ್ಕೆ ಮುಂಗಾರು ಆಗಮಿಸಲಿದ್ದು, ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು.