ನವದೆಹಲಿ : ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಕಿಸಾನ್ ಚಾನಲ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ರೈತ ಸಮುದಾಯ ದೇಶದ ಅತ್ಯಂತ ದೊಡ್ಡ ಸಮುದಾಯ. ಅವರ ಏಳಿಗೆಯನ್ನು ನಿರ್ಲಕ್ಷಿಸಿ ದೇಶ ಮುಂದುವರೆಯಲು ಸಾಧ್ಯವಿಲ್ಲ, ಈ ಕಾರಣಕ್ಕಾಗಿಯೇ ಸರ್ಕಾರ ಫಸಲು ಇಳುವರಿಯನ್ನು 50% ಹೆಚ್ಚಿಸುವ ಗುರಿ ಹೊಂದಿದೆ ಎಂದರು.
ಡಿಡಿ ಕಿಸಾನ್ ಚಾನೆಲ್ ರೈತರಿಗೆ ವ್ಯವಸಾಯದ ಅತ್ಯುತ್ತಮ ಮಾದರಿಗಳನ್ನು ಪರಿಚಯಿಸುತ್ತದೆ, ಎಲ್ಲಾ ರೀತಿಯ ಅಗತ್ಯ ಮಾಹಿತಿಯನ್ನು ಒದಗಿಸಲಿದೆ. ರೈತರು ಇದರ ಅನುಕೂಲ ಪಡೆಯಬೇಕು ಎಂದು ಹೇಳಿದರು.
ಇಂದಿನ ವ್ಯವಸ್ಥೆ ರೈತರು ತಮ್ಮನ್ನು ತಾವು ಮುಖ್ಯ ವಾಹಿನಿಯಿಂದ ಹೊರಗುಳಿಯುವಂತೆ ಮಾಡಿದೆ, ಈ ಕ್ಷೇತ್ರವನ್ನು ಕ್ರಿಯಾಶೀಲ ಮತ್ತು ಶಕ್ತಿಶಾಲಿ ಕ್ಷೇತ್ರವನ್ನಾಗಿ ಮಾಡಲು ಎನ್.ಡಿ.ಎ ಸರ್ಕಾರ ಪಣತೊಟ್ಟಿದೆ ಎಂದು ತಿಳಿಸಿದರು.