ಮುಂಬೈ : ಪ್ರಧಾನಿ ನರೇಂದ್ರ ಮೋದಿ ದೇಶದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಮಂಗೋಲಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು ಘೋಷಿದ್ದಾರೆ ಎಂದು ಮಿತ್ರಪಕ್ಷವಾದ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ವಿದೇಶ ಪ್ರವಾಸದ ಬಗ್ಗೆ ನೇರ ವಾಗ್ದಾಳಿ ನಡೆಸಿದೆ.
ಹಾಗಾಗಿ ಮಹಾರಾಷ್ಟ್ರಕ್ಕಿಂತ ಮಂಗೋಲಿಯಾ ಅದೃಷ್ಟಶಾಲಿ ದೇಶ ಎಂದು ಕುಟುಕಿರುವ ಶಿವಸೇನೆ, ಅಕಾಲಿಕ ಮಳೆಯಿಂದ ಮಹಾರಾಷ್ಟ್ರದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿ ಮಂಗೋಲಿಯಾಕ್ಕೆ ದೊಡ್ಡ ಮೊತ್ತದ ನೆರವನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಮೋದಿ ದೇಶದ ಸಮಸ್ಯೆ ಬಗ್ಗೆ ಮೊದಲು ತಲೆಕೆಡಿಸಿಕೊಳ್ಳಲಿ ಎಂದು ಹೇಳಿದೆ.
ಅದೇ ಭಾರೀ ಮೊತ್ತದ ಹಣವನ್ನು ಮಹಾರಾಷ್ಟ್ರದ ರೈತರಿಗೆ ನೀಡಿದರೆ ತುಂಬಾ ಅನುಕೂಲವಾಗುತ್ತಿತ್ತು. ಪ್ರಧಾನಿ ಮೋದಿ ಮಹಾರಾಷ್ಟ್ರ ರೈತರ ಹಾಗೂ ಜೈತಾಪುರ್ ನ್ಯೂಕ್ಲಿಯರ್ ಪವರ್ ಪ್ರೊಜೆಕ್ಟ್ ನಿಂದ ತೊಂದರೆ ಅನುಭವಿಸುತ್ತಿರುವ ಕೊಂಕಣ್ ನಿವಾಸಿಗಳತ್ತ ಚಿತ್ತ ಹರಿಸಲಿ ಎಂದು ಸಲಹೆ ನೀಡಿದೆ.