Untitled Document
Sign Up | Login    
Dynamic website and Portals
  
May 9, 2015

ಛತ್ತೀಸ್ ಗಢದ ಶಿಕ್ಷಣ ನಗರದಲ್ಲಿ ಮಕ್ಕಳಿಗೆ ಪ್ರಧಾನಿ ಮೋದಿ ಪಾಠ

ಛತ್ತೀಸ್ ಗಢದ  ಶಿಕ್ಷಣ ನಗರದಲ್ಲಿ ಮಕ್ಕಳಿಗೆ ಪ್ರಧಾನಿ ಮೋದಿ ಪಾಠ

ರಾಯ್ ಪುರ : ಛತ್ತೀಸ್ ಗಢ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸುಮಾರು 5 ಸಾವಿರ ಮಕ್ಕಳಿರುವ, 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರು ಎಜುಕೇಶನ್ ಸಿಟಿಯಲ್ಲಿ ಮಕ್ಕಳ ಜತೆ ಸಂವಾದ ನಡೆಸಿದರು.

ಸಂವಾದದಲ್ಲಿ ಪ್ರಧಾನಿ ಮೋದಿಯವರಿಗೆ, ಯಾವ ಘಟನೆಯಿದ ನೀವು ಪ್ರೇರಣೆಗೊಂಡಿದ್ದೀರಿ ಎಂಬ ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ಮೋದಿ, ಘಟನೆ ಯಾವುದೇ ಇರಲಿ ನಮ್ಮ ದೃಷ್ಠಿಕೋನ ಸರಿಯಿರಲಿ. ನಾನು ನನ್ನ ಅನುಭವಕ್ಕಿಂತ ಬೇರೆಯವರ ಅನುಭವದಿಂದ ಹೆಚ್ಚು ಪ್ರೇರಿತನಾಗಿದ್ದೆನೆ. ಕಠಿಣ ಪರಿಸ್ಥಿತಿಯಲ್ಲಿರುವ ಜೀವನ ನಮಗೆ ಹೆಚ್ಚು ಮಾದರಿ ಎಂದರು.

ಎಷ್ಟು ಹೊತ್ತು ಕೆಲಸ ಮಾಡುತ್ತೇನೆಂದು ನನಗೆ ಗೊತ್ತಿಲ್ಲ. ಕೆಲಸ ಮುಗಿದಾಗ ನನ್ನಲ್ಲಿ ಸಂತೃಪ್ತಿಯ ಭಾವವಿರುತ್ತೆ. ಶ್ರದ್ಧೆಯಿಟ್ಟು ಇಟ್ಟು ಕೆಲಸ ಮಾಡಬೇಕಾದ್ದು ಎಲ್ಲರ ಕರ್ತವ್ಯ. ಕೆಲಸದ ಮೇಲೆ ಪ್ರೀತಿ ಇರುವವರು ಸಮಯ ಲೆಕ್ಕಹಾಕಲ್ಲ. ದೇಶದ ಜನರ ಸೇವೆ ಮಾಡುವಾಗ ನನಗೆ ದಣಿವಾಗಲ್ಲ. ಜೀವನದಲ್ಲಿ ಸಫಲತೆ ಕಾಣಲು ಇಚ್ಛಾಶಕ್ತಿ ಮುಖ್ಯ. ಇಚ್ಛಾಶಕ್ತಿ ಸ್ಥಿರವಾಗಿದ್ದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಸಲಹೆ ನೀಡಿದರು.

ನೀವು ಏನು ಸಾಧಿಸಬೇಕು ಎಂದು ವ್ಯಾಸಂಗ ಮಾಡುತ್ತಿದ್ದೀರಿ? ಎಂದು ಮಕ್ಕಳಿಗೆ ಪ್ರಶ್ನೆ ಹಾಕಿದ ಪ್ರಧಾನಿ ಮೋದಿ, ಬಾಲ್ಯದ ಜೀವನ ಅತಿ ಆನಂದಮಯವಾಗಿರುತ್ತದೆ. ದೊಡ್ಡವರಾದ ಮೇಲೆ ಜೀವನ ಹೀಗೆ ಇರಲ್ಲ. ಆದರೆ ಜೀವನದಲ್ಲಿ ಏನನ್ನಾದ್ರೂ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited