ರಾಯ್ ಪುರ್ : ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ನಕ್ಸಲ್ಪೀಡಿತ ದಂತೇವಾಡಾ ಜಿಲ್ಲೆಗೆ ಶನಿವಾರ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಪರಿಶೀಲನೆ ನಡೆಸಲಿದ್ದಾರೆ.
ಇದೇ ವೇಳೆ ಅವರು ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್ ಘಾಟ್-ಜಗದಲ್ ಪುರ ರೈಲ್ವೆ ಮಾರ್ಗದ ಎರಡನೇ ಹಂತವನ್ನೂ ಉದ್ಘಾಟಿಸಲಿದ್ದಾರೆ.
ಅಲ್ಲದೇ 5 ಸಾವಿರ ಮಕ್ಕಳಿರುವ ಮತ್ತು 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಶಿಕ್ಷಣ ನಗರಕ್ಕೆ ಭೇಟಿ ನೀಡಿ, ಹಿಂದುಳಿದ ಬಾಲಕರ ಜತೆ ಮಾತುಕತೆ ನಡೆಲಿದ್ದಾರೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಸ್ಥಾಪಿಸಲಾಗಿರುವ ಕಾಲೇಜೊಂದಕ್ಕೆ ಭೇಟಿ ನೀಡಲಿದ್ದಾರೆ.
ದಂತೇವಾಡಾ ಪ್ರದೇಶವು ದಟ್ಟಾರಣ್ಯದಿಂದ ಕೂಡಿದ್ದು, ಇದು ಕಬ್ಬಿಣದ ಅದಿರು ಹೊಂದಿರುವ ಶ್ರೀಮಂತ ನೈಸರ್ಗಿಕ ಸಂಪತ್ತಿನ ರಾಜ್ಯವಾಗಿದೆ. ಇಲ್ಲಿ 18 ಸಾವಿರ ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರವು ಉದ್ಯೋಗ ಸೃಷ್ಟಿಗಾಗಿ ಪ್ರಕಟಿಸಿದೆ. ಆದರೆ ಗಣಿಗಾರಿಕೆ ಮತ್ತು ಅದರ ಹೆಸರಿನಲ್ಲಿ ನಡೆಯುತ್ತಿರುವ ಬಡವರ ಶೋಷಣೆ ಖಂಡಿಸಿ ನಕ್ಸಲೀಯರು ಆಂದೋಲನ ನಡೆಸುತ್ತಿದ್ದಾರೆ.