ಮುಂಬೈ : 'ಸಾಮಾಜಿಕ ಜಾಲತಾಣ'ದಲ್ಲಿ ಧರ್ಮ ನಿಂದನೆ ಮಾಡಿದ 20 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಅಮಿಶ್ ಕಾಟೆ ಎಂಬ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ, ಗೋಧ್ರಾ ಘಟನೆ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಫೇಸ್ ಬುಕ್ ನಲ್ಲಿ ಕಮೆಂಟಿಸಿದ್ದಕ್ಕಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಗೋಧ್ರಾ ನರಮೇಧದ ಫೋಟೋಗಳನ್ನು ವೀಕ್ಷಿಸಿದ ನಂತರ ಮೇ.2ರಂದು ಕಾಮೆಂಟಿಸಿರುವುದಾಗಿ ಅಮಿಶ್ ಕಾಟೆ ತಿಳಿಸಿದ್ದಾನೆ.
ಕಾಟೆ ವಿರುದ್ಧ ಸೆಕ್ಷನ್ 295(ಎ) ಅಡಿಯಲ್ಲಿ, ಪ್ರಕರಣ ದಾಖಲಾಗಿದ್ದು, ದ್ವೇಷವನ್ನು ಹರಡುವ ಆರೋಪ ಹೊರಿಸಲಾಗಿದೆ. 4 ದಿನಗಳವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಮುಸ್ಲಿಮರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು ತನಿಖೆ ನಡೆಸುತ್ತಿರುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ.