Untitled Document
Sign Up | Login    
Dynamic website and Portals
  
April 22, 2015

ರೈಲ್ವೆ ಜನರಲ್‌ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ

ನವದೆಹಲಿ : ರೈಲ್ವೆ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲೇ ನಿಂತು ಇನ್ನು ಮುಂದೆ ಟಿಕೆಟ್ಖರೀದಿಸಬೇಕು ಎಂದೇನಿಲ್ಲ. ಅನ್‌ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ ಗಳನ್ನು ಇನ್ನು ಮೊಬೈಲ್‌ ಆಪ್‌ ಮೂಲಕವೇ ಖರೀದಿಸಬಹುದು.

ತಿಂಗಳ ಪಾಸನ್ನೂ ಇದೇ ರೀತಿ ಖರೀದಿ ಮಾಡಬಹುದು. ಈ ವಿನೂತನ ಸೇವೆಗೆ ರೈಲ್ವೆ ಇಲಾಖೆ ಬುಧವಾರ ಚಾಲನೆ ನೀಡಲಿದೆ. ಇದಕ್ಕೆ ಸಂಬಂಧಿಸಿದ ಮೊಬೈಲ್‌ ಆಪನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಲಿದೆ.

ಇದುವರೆಗೆ ಮುಂಗಡ ಕಾದಿರಿಸಿದ ಟಿಕೆಟ್‌ ಗಳನ್ನು ಮೊಬೈಲ್‌ ನಲ್ಲಿ ಲಭ್ಯವಿರುವ ಐಆರ್‌ ಸಿ ಟಿಸಿ ವೈಬ್‌ ಸೈಟ್‌ ಆಪ್‌ ಮೂಲಕ ಖರೀದಿಸಬಹುದಾಗಿತ್ತು. ಆದರೆ ಸಾಮಾನ್ಯ ಟಿಕೆಟ್‌ ಗಳ ಖರೀದಿ ಮೊಬೈಲ್‌ ನಲ್ಲಿ ಸಾಧ್ಯವಿರಲಿಲ್ಲ. ಈ ಸಮಸ್ಯೆಯನ್ನು ಹೊಸ ಅಪ್ಲಿಕೇಷನ್‌ ದೂರ ಮಾಡಲಿದೆ.

ಈ ಸೇವೆಯಿಂದ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಜತೆಗೆ ಟಿಕೆಟ್‌ ಮುದ್ರಣಕ್ಕೆ ಬೇಕಾದ ಕಾಗದವು ಉಳಿತಾಯವಾಗಲಿದ್ದು, ಪರಿಸರ ರಕ್ಷಣೆಗೆ ಅನುಕೂಲವಾಗಲಿದೆ. ರೈಲಿನಲ್ಲಿ ಟಿಕೆಟ್‌ ತಪಾಸಕರು ಆಗಮಿಸಿದಾಗ ಅವರಿಗೆ ಮೊಬೈಲ್‌ ಆಪ್‌ ನಲ್ಲಿರುವ ಟಿಕೆಟ್‌ ತೋರಿಸಿದರೆ ಸಾಕು. ಮುದ್ರಿತ ಪ್ರತಿಯನ್ನೇ ತೋರಿಸಬೇಕು ಎಂದೇನಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಂಡ್ರಾಯ್ಡ ಆಧರಿತ ಫೋನ್‌ ಗಳಿಗೆ ಮಾತ್ರ ಈ ಸೇವೆ ಲಭ್ಯ. ಗೂಗಲ್‌ ಆಪ್‌ ಸ್ಟೋರ್‌ ಮೂಲಕ ಆಪ್‌ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಬಳಿಕ ಬಳಕೆದಾರನಿಗೆ ನೋಂದಣಿ ಸಂಖ್ಯೆ ಸಿಗಲಿದೆ. ನೋಂದಣಿ ಸಂಖ್ಯೆ ಆಧರಿಸಿ ಟಿಕೆಟ್‌ ಬುಕ್‌ ಮಾಡಬಹುದು. ಟಿಕೆಟ್ಖರೀದಿ ಹಣವನ್ನು ಮೊಬೈಲ್‌ ಪೇಮೆಂಟ್‌ ವ್ಯವಸ್ಥೆಯ ಇ-ವ್ಯಾಲೆಟ್‌ ಮೂಲಕ ಅಥವಾ ಐಆರ್‌ ಸಿಟಿಸಿ ವೆಬ್‌ ಸೈಟ್‌ ಮೂಲಕ ಅಥವಾ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಬಹುದು.

ಸ್ಮಾರ್ಟ್‌ ಫೋನ್‌ ಹೊಂದಿರುವವರು ರೈಲ್ವೆ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು

ಆಪ್‌ ಡೌನ್‌ಲೋಡ್‌ ಬಳಿಕ ನೋಂದಣಿ ಸಂಖ್ಯೆ ಲಭ್ಯ

ನೋಂದಣಿ ಸಂಖ್ಯೆ ಬಳಸಿ ಟಿಕೆಟ್ಖರೀದಿಸ‌ಬಹುದು

ಹಣ ಪಾವತಿಗೆ ಇ-ವ್ಯಾಲೆಟ್‌ ಬಳಸಬಹುದು ಅಥವಾ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ತೆರಳಿ ಡೆಬಿಡ್‌/ ಕ್ರೆಡಿಟ್‌ ಕಾರ್ಡ್‌ ಮೂಲಕವೂ ಪಾವತಿ ಅವಕಾಶ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited