ಲಕ್ನೋ : ಬಿಜೆಪಿ ನಕಲಿ ರಾಮ ಭಕ್ತರ ಪಕ್ಷವಾಗಿದೆ ಎಂದು ಆರೋಪ ಮಾಡಿರುವ ಶಿವಸೇನೆಯು 2017ರಲ್ಲಿ ನಡೆಯವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎಲ್ಲ 403 ಸ್ಥಾನಗಳಿಗೂ ತಾನು ಸ್ಫರ್ಧಿಸುವುದಾಗಿ ಹೇಳಿದೆ.
ಕಾನ್ಪುರದ ಕಿದ್ವಾಯಿ ನಗರದಲ್ಲಿ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಸೇನೆಯ ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಅನಿಲ್ ಸಿಂಗ್ ಅವರು, ಮಹಾರಾಷ್ಟ್ರದಲ್ಲಿ ಮತ್ತು ಕೇಂದ್ರದಲ್ಲಿ ಆಳುವ ಭಾರತೀಯ ಜನತಾ ಪಕ್ಷದ ಮಿತ್ರ ಪಕ್ಷನಾಗಿರುವ ಶಿವಸೇನೆಯು, ಮುಸ್ಲಿಮರಿಗೆ ಉಚಿತ ಕೊಡುಗೆಗಳನ್ನು ಮತ್ತು ಉದ್ಯೋಗದಲ್ಲಿ ಕೋಟಾಗಳನ್ನು ನೀಡುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಲು ಸಾಧ್ಯವಿಲ್ಲ. ಎರಡು ಮಕ್ಕಳನ್ನು ಹೊಂದುವ ನಿಯಮವನ್ನು ಅವರು ಅನುಸರಿಸಿದರೆ ಮತ್ತು ವ್ಯಾಸೆಕ್ಟಮಿಯಂತಹ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಲು ಅವರು ಒಪ್ಪಿದರೆ ಮಾತ್ರವೇ ಅವರ ಸಬಲೀಕರಣ ಸಾಧ್ಯ ಎಂದು ಹೇಳಿದ್ದಾರೆ.
ನಾವು ಏನನ್ನು ಹೇಳುವೆವೋ ಅದನ್ನೇ ಮಾಡುತ್ತೇವೆ; ನಕಲಿ ರಾಮಭಕ್ತರ ಬಗ್ಗೆ ಎಚ್ಚರವಿರಲಿ ಎಂದು ಹೇಳುವ ಮೂಲಕ, ಬಿಜೆಪಿಯನ್ನು ಲೇವಡಿ ಮಾಡಿದರು. ಬಿಜೆಪಿ ನಾಯಕರು ಶ್ರೀರಾಮದ ನಕಲಿ ಭಕ್ತರು; ಯಾಕೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅಯೋಧ್ಯೆಯಲ್ಲಿ ರಾಮ ಮಂದಿ ನಿರ್ಮಿಸಲು ಅವರು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದುದರಿಂದ ಹಿಂದತ್ವದ ಅಜೆಂಡಾ ಮೇಲೆ ಶಿವಸೇನೆಯು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 403 ಸ್ಥಾನಗಳಿಗೆ ಸ್ಪರ್ಧಿಸಲಿದೆ. ಒಂದೊಮ್ಮೆ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಲಿದೆ. ಬಿಜೆಪಿಯು ಈ ವಿಷಯವನ್ನು ತನ್ನ ಅಜೆಂಡಾದಿಂದ ಕೈಬಿಟ್ಟಿದೆ. ಆದರೆ ಶಿವಸೇನೆ ಹಾಗೆ ಮಾಡುವುದಿಲ್ಲ; ಅದು ಈ ವಿಷಯವನ್ನು ತನ್ನ ಅಜೆಂಡಾದಲ್ಲಿ ಮುಂದುವರಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು.