Untitled Document
Sign Up | Login    
Dynamic website and Portals
  
April 9, 2015

ಸತ್ಯಂ ಕಂಪ್ಯೂಟರ್ಸ್ ಹಗರಣ: ಎಲ್ಲಾ 10 ಜನರ ವಿರುದ್ಧ ಆರೋಪ ಸಾಬೀತು

ರಾಮಲಿಂಗರಾಜು ರಾಮಲಿಂಗರಾಜು

ಹೈದ್ರಾಬಾದ್ : ಬಹುಕೋಟಿ ಸತ್ಯಂ ಕಂಪ್ಯೂಟರ್ಸ್ ಹಗರಣಕ್ಕೆ ಸಂಬಧಿಸಿದಂತೆ ಪ್ರಕರಣದ ಎಲ್ಲಾ 10 ಜನನರ ವಿರುದ್ಧ ಆರೋಪ ಸಾಬೀತಾಗಿದೆ.

ಸತ್ಯಂ ಕಂಪ್ಯೂಟರ್ಸ್ ನ ಮುಖ್ಯಸ್ಥ ವ್ಯವಸ್ಥಾಪಕ ರಾಮಲಿಂಗಾರಾಜು ಸೇರಿದಂತೆ ಒಟ್ಟು 10 ಜನರು ತಪ್ಪಿತಸ್ಥರು ಎಂದು ಹೈದ್ರಾಬಾದ್ ನ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸತ್ಯಂ ಕಂಪ್ಯೂಟರ್ಸ್ ನ ಸಂಸ್ಥಾಪಕ ರಾಮಲಿಂಗರಾಜು, ಮಾಜಿ ಚೀಫ್ ಎಡಿಟರ್ ಪ್ರಭಾಕರ್ ಗುಪ್ತಾ, ಮಾಜಿ ಸಿಎಫ್ ಒ ವಿ ಶ್ರೀನಿವಾಸ್, ರಾಮಲಿಂಗರಾಜುವಿನ ಇಬ್ಬರು ಸಹೋದರರು, ಇಬ್ಬರು ೨ ಪಿಡಬ್ಲ್ಯುಪಿ ಆಡಿಟರ್ಸ್, ಮೂವರು ಉದ್ಯೋಗಿಗಳು ಒಟ್ಟು 10 ಜನರ ವಿರುದ್ಧ ಆರೋಪ ಸಾಬೀತಾಗಿದ್ದು, ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿದೆ.

ಹಗರಣದ ಎಲ್ಲಾ 10 ಜನರ ವಿರುದ್ಧ ಆರೋಪ ಸಾವ್ಬೀತು. 2009 ಜನವರಿ 7ರಂದು ಸತ್ಯಂ ಕಂಪ್ಯೂಟರ್ಸ್ ನ ಬಹುಕೋಟಿ ಹಗರಣ ಬೆಳಕಿಗೆ ಬಂದಿದ್ದು, ಸತ್ಯಂ ಅಧಿಕಾರಿಗಳ ವಿರುದ್ಧ ಸಿಬಿಐ ಫ್ರಾಡ್ ಕೇಸ್ ದಾಖಲಿಸಿತ್ತು. ಹಗರಣ ನಡೆದು ಆರು ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದ್ದು, ನಾಳೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

ಮೂಲತಃ ಹೈದರಾಬಾದ್‌ನಲ್ಲಿ ಸತ್ಯಂ ಕಂಪ್ಯೂಟರ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದ ಬಿ.ರಾಮಲಿಂಗರಾಜು 14 ಸಾವಿರ ಕೋಟಿ ಹಣವನ್ನು ವಂಚನೆ ಮಾಡಿದ್ದಾರೆಂಬ ಆರೋಪವಿತ್ತು. ಕಾರ್ಪೊರೇಟ್ ಜಗತ್ತಿನಲ್ಲೇ ಇದು ಅತ್ಯಂತ ದೊಡ್ಡ ಹಗರಣವೆಂದು ಬಿಂಬಿತವಾಗಿತ್ತು. ಆದಾಯ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ರಾಮಲಿಂಗರಾಜು ಸೇರಿದಂತೆ ಕಂಪೆನಿಯ 10 ಮಂದಿ ಅಧಿಕಾರಿಗಳನ್ನು 2009 ಜನವರಿ 22ರಂದು ಬಂಧಿಸಿದ್ದರು. ಸರ್ಕಾರ ಕೂಡ ಸಿಐಡಿ ತನಿಖೆಗೆ ಆದೇಶ ನೀಡಿತ್ತು. 53 ಸಾವಿರ ಪುಟಗಳುಳ್ಳ ವರದಿಯನ್ನು ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದು ಬಹುಕೋಟಿ ವಂಚನೆಯಾಗಿದ್ದರಿಂದ ಸಿಬಿಐ ತನಿಖೆಗೆ ಅಂದಿನ ಸರ್ಕಾರ ಆದೇಶ ನೀಡಿತ್ತು. ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಹೈದರಾಬಾದ್‌ನ ವಿಶೇಷ ನ್ಯಾಯಾಲಯಕ್ಕೆ 2010 ಜನವರಿ 7ರಂದು 3000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited