BW News Bureau : ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾವೇರಿ 1,2 ಹಾಗೂ 3ನೇ ಹಂತದ ಯೋಜನೆಗಳ ನಿರ್ವಹಣೆಗಾಗಿ ಜಲಮಂಡಳಿಯು ನೀರಿನ ಪೂರೈಕೆ ಸ್ಥಗಿತಗೊಳಿಸಲಿದ್ದು, ಪರಿಣಾಮ ಏಪ್ರಿಲ್ 9 ಹಾಗೂ 10ರಂದು ನಗರದ ಬಹುತೇಕ ಕಡೆಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.
ಏಪ್ರಿಲ್ 9ರಂದು ಜಲಮಂಡಳಿ ಕಾವೇರಿ ವಿಭಾಗದಿಂದ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕಾವೇರಿ ಮೊದಲ ಹಂತದ ನಿರ್ವಹಣೆಗಾಗಿ ಏಪ್ರಿಲ್ 9ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ಕಾವೇರಿ 2 ಹಾಗೂ 3ನೇ ಹಂತದ ಯೋಜನೆ ನಿರ್ವಹಣೆಗೆ ಏಪ್ರಿಲ್ 10ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನೀರು ಪಂಪಿಂಗ್ ಸ್ಥಗಿತಗೊಳಿಸಲಾಗುವುದು.
ನಗರದ ಕುಮಾರಸ್ವಾಮಿ ಲೇಔಟ್, ಬನಶಂಕರಿ 1 ಹಾಗೂ 2ನೇ ಹಂತ, ಬಸವನಗುಡಿ, ಚಾಮರಾಜಪೇಟೆ, ಕತ್ರಿಗುಪ್ಪೆ, ಮೌಂಟ್ ಜಾಯ್ ಪ್ರದೇಶ, ಜಯನಗರ, ಡೈರಿ ವೃತ್ತ, ಕೋರಮಂಗಲ, ಆಡುಗೋಡಿ, ಪಾದರಾಯನಪುರ, ಜಗಜೀವನ್ ರಾಮ್ ನಗರ, ಮೈಸೂರು ರಸ್ತೆ, ಮಡಿವಾಳ, ಮಾರುತಿನಗರ, ಸಿಎಲ್ ಆರ್ ಜಾನ್ಸನ್ ಮಾರುಕಟ್ಟೆ, ಶಾಂತಿನಗರ, ಆನೆಪಾಳ್ಯ, ಲಕ್ಷ್ಮಣ್ ರಾವ್ ಕೊಳಗೇರಿ, ಅಲಸೂರು, ಕೇಂಬ್ರಿಜ್ ಲೇಔಟ್ ಪ್ರದೇಶದಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಅದೇ ರೀತಿ ಭಾಗಶಃ ದೊಮ್ಮಲೂರು, ಜೆ.ಪಿ. ನಗರ, ಯಡಿಯೂರು, ಕಸ್ತೂರ್ಬಾ ನಗರ, ಕಲಾಸಿಪಾಳ್ಯ, ಪಾರ್ವತಿಪುರ, ಶಂಕರಪುರ, ಕಬ್ಬನ್ಪೇಟೆ, ಚಿಕ್ಕಲಾಲ್ಬಾಗ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಬನ್ನಪ್ಪಪಾರ್ಕ್, ಗಾಂಧಿನಗರ, ಕಾಟನ್ಪೇಟೆ, ಮಾಧವನಗರ, ಫೇರ್ ಫೀಲ್ಡ್ ಬಡಾವಣೆ, ಶಿವಾಜಿ ನಗರದ ಹಲವು ಪ್ರದೇಶ, ಫ್ರೆàಜರ್ಟೌನ್, ಪಿಳ್ಳಣ್ಣ ಗಾರ್ಡನ್, ಜೀವನಹಳ್ಳಿ, ಕುಮಾರ್ ಪಾರ್ಕ್ ವೆಸ್ಟ್, ವಸಂತನಗರ, ಸದಾಶಿವ ನಗರ, ವೈಯಾಲಿಕಾವಲ್, ಪ್ಯಾಲೇಸ್ ಗುಟ್ಟಹಳ್ಳಿ, ಶೇಷಾದ್ರಿಪುರಂ, ಜಯಮಹಲ್, ನಂದಿದುರ್ಗ ರಸ್ತೆ, ಮುನಿರೆಡ್ಡಿಪಾಳ್ಯ, ಗಂಗೇನಹಳ್ಳಿ, ಕಾವಲ್ಭೈರಸಂದ್ರ, ಚೋಳನಾಯ್ಕನಹಳ್ಳಿ, ಮನೋರಾಯನಪಾಳ್ಯ, ಎಲ್ ಆರ್ ಬಂಡೆ, ಮಂಜುನಾಥಬಡಾವಣೆ, ಎಚ್ಎಂಟಿ ಬಡಾವಣೆ, ಎಂಎಲ್ಎ ಬಡಾವಣೆ, ಸಂಜಯನಗರದ ಕೆಲ ಪ್ರದೇಶದಲ್ಲಿ ನೀರು ಪೂರೈಕೆ ಇರುವುದಿಲ್ಲ. ಅಲ್ಲದೇ, ಮಲ್ಲೇಶ್ವರ, ಶ್ರೀರಾಮಪುರ, ಗಾಯತ್ರಿನಗರ, ಯಶವಂತಪುರ ಸೇವಾಠಾಣೆ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ವ್ಯತ್ಯಯ ಆಗಲಿದೆ ಎಂದು ಜಲಮಂಡಳಿ ತಿಳಿಸಿದೆ.