ನವದೆಹಲಿ : 'ಪಂಡಿತ್ ಮದನ್ ಮೋಹನ್ ಮಾಳವಿಯಾ'ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾ.30ರಂದು ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಮರಣೋತ್ತರ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದ ಮದನ್ ಮೋಹನ್ ಮಾಳವಿಯ ಕುಟುಂಬ ಸದಸ್ಯರು ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ವೇಳೆ ಸಾಮಾಜಿಕ ಕ್ಷೇತ್ರ, ವಿಜ್ನಾನ ಕ್ಷೇತ್ರ, ಕೈಗಾರಿಕಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗಣ್ಯರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಎಲ್.ಕೆ ಅಡ್ವಾಣಿ ಹಾಗೂ ಸಿದ್ಧಗಂಗಾ ಪೀಠಾಧಿಪತಿಗಳಾದ ಶಿವಕುಮಾರ ಸ್ವಾಮೀಜಿ ಅವರಿಗೆ ಪದ್ಮಭೂಷಣ ಪ್ರಶಸ್ತಿ, ಮೋಹನ್ದಾಸ್ ಪೈ, ಇಸ್ರೊ ವಿಜ್ಞಾನಿಗಳಾದ ಎಸ್.ಅರುಣನ್, ಎಸ್.ಕೆ.ಶಿವಕುಮಾರ್, ಡಿ.ಆರ್.ಡಿ.ಒ ವಿಜ್ಞಾನಿ, ಡಾ. ಪ್ರಹ್ಲಾದ್, ವಿಜ್ಞಾನಿ ವಸಂತ್ ಶಾಸ್ತ್ರಿ ಅವರನ್ನೂ ಒಳಗೊಂಡಂತೆ ಒಟ್ಟು 9 ಸಾಧಕರಿಗೆ ಪದ್ಮ ವಿಭೂಷಣ ಪ್ರಶಸ್ತಿ 20 ಮಹನಿಯರಿಗೆ 'ಪದ್ಮ ಭೂಷಣ' ಹಾಗೂ 75 ಗಣ್ಯರಿಗೆ 'ಪದ್ಮಶ್ರೀ' ಪುರಸ್ಕಾರ ನೀಡಿ ಗೌರವಿಸಲಾಗಿದೆ.