Untitled Document
Sign Up | Login    
Dynamic website and Portals
  
March 21, 2015

ವಿದೇಶಗಳಲ್ಲಿ ಕಪ್ಪು ಹಣ ಬಚ್ಚಿಟ್ಟವರಿಗೆ ಜೈಲು ಶಿಕ್ಷೆ

ನವದೆಹಲಿ : ವಿದೇಶಗಳಲ್ಲಿ ಕಪ್ಪು ಹಣವನ್ನು ಬಚ್ಚಿಡುವವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸುವ ಕಪ್ಪು ಹಣ ನಿಯಂತ್ರಣ ಕುರಿತ ವಿಧೇಯಕವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಮಂಡಿಸಿದರು.

ಬಜೆಟ್‌ನಲ್ಲಿ ನೀಡಿದ್ದ ಆಶ್ವಾಸನೆಯಂತೆ ಲೋಕಸಭೆಯಲ್ಲಿ ಜೇಟ್ಲಿ, 88 ನಿಯಮ ನಿಬಂಧನೆಗಳನ್ನು ಒಳಗೊಂಡಿರುವ ' ಅಘೋಷಿತ ವಿದೇಶಿ ಮೂಲದ ಆದಾಯ ಮತ್ತು ಆಸ್ತಿ (ತೆರಿಗೆ ಅನ್ವಯ) ವಿಧೇಯಕ 2015' ನ್ನು ಮಂಡಿಸಿದರು. ಈ ವಿಧೇಯಕವನ್ನು 2016ರರ ಏಪ್ರಿಲ್ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ವಿದೇಶಗಳಲ್ಲಿರುವ ಅಘೋಷಿತ ಆದಾಯಕ್ಕೆ ಆದಾಯ ತೆರಿಗೆ ಕಾಯಿದೆಯ ವ್ಯಾಪ್ತಿಗೆ ಬರದಿರುವ, ಪ್ರತ್ಯೇಕ ದರದ ತರಿಗೆ ವಿಧಿಸಲು ವಿಧೇಯಕ ಅವಕಾಶ ನೀಡಿದ್ದು, ಶೇ.30ರಷ್ಟು ತೆರಿಗೆ ದರವನ್ನು ವಿಧಿಸುವ ಪ್ರಸ್ತಾಪವಿದೆ.

ವಿದೇಶಗಳಲ್ಲಿ ಅಘೋಷಿತ ಆದಾಯವಿರುವವರಿಗೆ ಅದನ್ನು ಘೋಷಿಸಲಿ ಸೀಮಿತ ಅವಕಾಶ ನೀಡಲಾಗುವುದು. ನಂತರ ಶೇ.30ರಷ್ಟು ತೆರಿಗೆ ಮತ್ತು ಅಷ್ಟೇ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ.

ವಿದೇಶಿ ಮೂಲದ ಆದಾಯ, ಪ್ರಾಪರ್ಟಿಗಳ ಬಗ್ಗೆ ಘೋಷಿಸಲಿ ಸೀಮಿತ ಅವಕಾಶವನ್ನು ನೀಡಲಾಗುತ್ತಿದ್ದರೂ, ದಂಡವನ್ನು ತಪ್ಪಿಸಲಾಗುವುದಿಲ್ಲ. ವಿಧೇಯಕದಲ್ಲಿರುವ ನಿಯಮಾವಳಿಗಳನ್ನು ಉಲ್ಲಂಘಿಸುವವರಿಗೆ ಭಾರಿ ದಂಡ ಕಾದಿರುತ್ತದೆ.

ವ್ಯಕ್ತಿಯೊಬ್ಬ ಹೊರ ರಾಷ್ಟ್ರಗಳಲ್ಲಿರುವ ತನ್ನ ಆಸ್ತಿ ಅಥಾ ಅಲ್ಲಿಂದ ಸಿಗುವ ಆದಾಯದ ಬಗ್ಗೆ ವಿವರಗಳನ್ನು ಘೋಷಿಸದಿದ್ದರೆ, ತೆರಿಗೆಗೆ ಅರ್ಹ ಮೊತ್ತದ ಮೂರು ಪಟ್ಟು, ಅಘೋಷಿತ ಆದಾಯದ ಶೇ.90ರಷ್ಟು ಮೊತ್ತ ಅಥವಾ ಪ್ರಾಪರ್ಟಿಯ ಮೌಲ್ಯದ ಶೇ.90ರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ವಿದೇಶಿ ಆಸ್ತಿ, ಆದಾಯಕ್ಕೆ ಸಂಬಂಧಿಸಿ ತೆರಿಗೆ ವಂಚನೆಯ ದುರುದ್ದೇಶಕ್ಕಾಗಿ ಯತ್ನಿಸಿದರೆ ದಂಡದ ಜತೆಗೆ 3ರಿಂದ 10 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ವಿದೇಶಿ ಆಸ್ತಿ ಮತ್ತು ಬ್ಯಾಂಕ್ ಖಾತೆಯ ಅಥವಾ ಆದಾಯ ವಿವರಗಳನ್ನು ಸಲ್ಲಿಸದಿದ್ದರೆ 6 ತಿಂಗಳಿನಿಮದ 7 ವರ್ಷದ ತನಕ ಜೈಲು ಶಿಕ್ಷೆಯಾಗಲಿದೆ. ಆದಾಯ ತೆರಿಗೆ ವಿವರ ಸಲ್ಲಿಸಿದ್ದರೂ, ವಿದೇಶಿ ಮೂಲದ ಆದಾಯದ ಬಗ್ಗೆ ಮುಚ್ಚಿಟ್ಟರೆ ದಂಡನೆ ಎದುರಿಸಬೇಕಾಗುತ್ತದೆ. ವಿದೇಶಿ ಆದಾಯ, ಸಂಪತ್ತಿನ ವಿವರ ಸಲ್ಲಿಸದಿದ್ದರೆ 10 ಲಕ್ಷ ರೂ. ದಂಡ ಕಟ್ಟಬೇಕಾಗಿ ಬರಬಹುದು. ಬಜೆಟ್ ಅಧಿವೇಶನದ ಎರಡನೆಯ ಚರಣದಲ್ಲಿ ವಿಧೇಯಕವನ್ನು ಪರಿಗಣಿಸಲಾಗುವುದು ಎಂದು ಜೇಟ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿದೇಶಿ ಸಂಪತ್ತು ಅಥವಾ ಆದಾಯದ ಫಲಾನುಭವಿಗಳಿಗೆ ಕೂಡ ನೂತನ ವಿಧೇಯಕ ಅನ್ವಯವಾಗಲಿದೆ. ವಿಧೇಯಕವು 2002ರ ಅಕ್ರಮ ಹಣ ವರ್ಗವಣೆ ತಡೆ ಕಾಯಿದೆಯ ತಿದ್ದುಪಡಿ ಪ್ರಸ್ತಾಪವನ್ನೂ ಒಳಗೊಂಡಿದೆ. ವಿದೇಶಿ ಮೂಲದ ಆದಾಯ, ಆಸ್ತಿ ಬಗ್ಗೆ ವಿವರಗಳನ್ನು ಕಲೆ ಹಾಕಲು ಸರಕಾರಕ್ಕೆ ಇತರ ರಾಷ್ಟ್ರಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲು ಹೆಚ್ಚಿನ ಅಧಿಕಾರವನ್ನು ವಿಧೇಯಕ ನೀಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited