Untitled Document
Sign Up | Login    
Dynamic website and Portals
  
December 23, 2015

ಸಂಸತ್ತಿನಲ್ಲಿ ಬಾಲಾಪರಾಧಿ ಕಾಯ್ದೆ ಅಂಗೀಕಾರ

ನವದೆಹಲಿ : ಮಂಗಳವಾರ ರಾಜ್ಯಸಭೆಯಲ್ಲಿ ಬಾಲಾಪರಾಧಿ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆಗೆ ಈಗ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆಕಿದೆ. ಈ ಸಂದರ್ಭದಲ್ಲಿ ಕಲಾಪದಲ್ಲಿ ಉಪಸ್ಥಿತರಿದ್ದ ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದರು.

ಈ ಕಾಯ್ದೆಯ ಪ್ರಕಾರ, ಘೋರ ಅಪರಾಧ ಮಾಡಿದ 16-18 ವರ್ಷ ನಡುವಿನ ವಯಸ್ಸಿನವರನ್ನು ವಯಸ್ಕರಂತೆ ವಿಚಾರಣೆಗೆ ಹಾಜರುಪಡಿಸಲಾಗುವುದು. ಜೈಲು ಶಿಕ್ಷೆಗೆ ಗುರಿಯಾದ ಬಾಲಾಪರಾಧಿಯನ್ನು ಇತರ ಕೈದಿಗಳ ಜತೆ ಬಂಧನದಲ್ಲಿಡದೇ, ಪ್ರತ್ಯೇಕವಾಗಿ (ಸುಧಾರಣಾ ಕೇಂದ್ರ) ಇರಿಸಲಾಗುವುದು. ಆತನಿಗೆ 21 ವರ್ಷ ತುಂಬಿದ ನಂತರ ಶಿಕ್ಷೆ ಮುಂದುವರಿಸಬೇಕೊ ಅಥವಾ ಬಿಡುಗಡೆ ಮಾಡಬೇಕೊ ಎಂಬುದನ್ನು ಪರಿಶೀಲಿಸಲಾಗುವುದು. ಮಕ್ಕಳಿಗೆ ಮದ್ಯ ಅಥವಾ ಡ್ರಗ್ಸ್​ನಂಥ ಮಾದಕ ವಸ್ತುಗಳನ್ನು ನೀಡುವ ವ್ಯಕ್ತಿಗೆ 7 ವರ್ಷ ಜೈಲು ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.

ಎಷ್ಟೇ ಗಂಭೀರ ಅಪರಾಧ ಎಸಗಿದ್ದರೂ ಬಾಲಾಪರಾಧಿಗೆ ಗರಿಷ್ಠ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಜೀವಾವಧಿ ಹಾಗೂ ಮರಣ ದಂಡನೆಯಂಥ ಶಿಕ್ಷೆ ವಿಧಿಸಲು ಅವಕಾಶವಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited