ಬೆಂಗಳೂರು : ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಚರ್ಚಿಸಿ. ಬೇರೆ ವಿಷಯ ಮಾತನಾಡಿ ಚರ್ಚೆಯನ್ನು ಬೇರೆಡೆ ಸೆಳೆಯಬಾರದು ಎಂದು ಹೇಳುವ ಮೂಲಕ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಅಜ್ನಾನ ಪ್ರದರ್ಶಿಸಿದ ಘಟನೆ ನಡೆಯಿತು.
ವಿಧಾನಪರಿಷತ್ ನಲ್ಲಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿಯ ವಿಮಲಾ ಗೌಡ, ರಘುನಾಥ್ ಮಲ್ಕಾಪುರೆ ಅವರು ರಾಜ್ಯದಲ್ಲಿ ಹಂದಿಜ್ವರದ ರೋಗ ಹರಡುವಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಆಗ ಮಧ್ಯಪ್ರವೇಶಿಸಿದ ಸಭಾಪತಿ ಶಂಕರಮೂರ್ತಿಯವರು, ಹಂದಿಜ್ವರದ ವಿಚಾರ ಬಿಟ್ಟು ಎಚ್1ಎನ್1 ಬಗ್ಗೆ ಚರ್ಚಿಸಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನ ಶಾಸಕ ರಾಮಕೃಷ್ಣ ಸಭಾಪತಿಯವರಿಗೆ ಪ್ರತಿಕ್ರಿಯೆ ನೀಡುತ್ತಾ, ಸ್ವಾಮಿ ಎಚ್1ಎನ್1, ಹಂದಿಜ್ವರ ಎರಡೂ ಒಂದೇ. ಕನ್ನಡದಲ್ಲಿ ಎಚ್1ಎನ್1ಗೆ ಹಂದಿಜ್ವರ ಎನ್ನುತ್ತಾರೆ ಎಂದು ಹೇಳಿದಾಗ ಪರಿಷತ್ ನಗೆಗಡಲಲ್ಲಿ ತೇಲಾಡಿದ ಪ್ರಸಂಗ ನಡೆಯಿತು.