Untitled Document
Sign Up | Login    
Dynamic website and Portals
  
February 12, 2015

ಅಮೆರಿಕಾ ಪೊಲೀಸರಿಂದ ಭಾರತೀಯ ವ್ಯಕ್ತಿ ಮೇಲೆ ಹಲ್ಲೆ: ತನಿಖೆಗೆ ಒತ್ತಾಯಿಸಿದ ಭಾರತ ಸರ್ಕಾರ

ಧಾರ್ಮಿಕ ಸಹಿಷ್ಣುತೆ ಬಗ್ಗೆ ಪ್ರವಚನ ನೀಡಿದವರ ದೇಶದಲ್ಲಿ ಭಾರತೀಯರಿಗಿಲ್ಲ ಭದ್ರತೆ

ಅಮೆರಿಕಾ ಪೊಲೀಸರಿಂದ ಹಲ್ಲೆಗೊಳಗಾಗಿರುವ ಸುರೇಶ್ ಭಾಯ್ ಪಟೇಲ್ ಅಮೆರಿಕಾ ಪೊಲೀಸರಿಂದ ಹಲ್ಲೆಗೊಳಗಾಗಿರುವ ಸುರೇಶ್ ಭಾಯ್ ಪಟೇಲ್

ವಾಷಿಂಗ್ ಟನ್ : 'ಧಾರ್ಮಿಕ ಸಹಿಷ್ಣುತೆ' ಬಗ್ಗೆ ಇತ್ತೀಚೆಗಷ್ಟೇ ಭಾರತಕ್ಕೆ ಉಪದೇಶ ನೀಡಿದ್ದ ಅಮೆರಿಕಾದಲ್ಲಿ ಅಲ್ಲಿನ ಪೊಲೀಸರು ಭಾರತೀಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದೆ.

ಗುಜರಾತ್ ಮೂಲದ 57 ವರ್ಷದ ಸುರೇಶ್ ಭಾಯ್ ಪಟೇಲ್ ಎಂಬುವವರು ಮನೆ ಮುಂದೆ ನಡೆದು ಹೋಗುತ್ತಿರಬೇಕಾದರೆ, ಪೊಲೀಸರು ಹಲ್ಲೆ ನಡೆಸಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.

ಸುರೇಶ್ ಭಾಯ್ ಪಟೇಲ್ ಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ ಎಂಬುದೇ ಪೊಲೀಸರು ಥಳಿಸಿರುವುದಕ್ಕೆ ಕಾರಣ ಎಂದು ತಿಳಿದುಬಂದಿದೆ. ಸುರೇಶ್ ಅವರು ಎರಡು ವಾರಗಳ ಹಿಂದಷ್ಟೇ ಗುಜರಾತಿನಿಂದ ಅಮೆರಿಕಾದಲ್ಲಿರುವ ತಮ್ಮ ಮಗನ ಮನೆಗೆ ತೆರಳಿದ್ದರು. ಪ್ರತಿ ದಿನ ಪಟೇಲ್ ತಮ್ಮ ಮಗನ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು.

ಸುರೇಶ್ ಭಾಯ್ ಅವರ ಬಣ್ಣವನ್ನು ನೋಡಿದ ನೆರೆ ನಿವಾಸಿಗಳು, ನಿಶ್ಶಸ್ತ್ರ ಕಪ್ಪು ಜನಾಂಗದ ವ್ಯಕ್ತಿ ಎಂದು ಅನುಮಾನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿರುವ ಪೊಲೀಸರಿಗೆ ಉತ್ತರಿಸಲು ಸುರೇಶ್ ಭಾಯ್ ಇಂಗ್ಲೀಷ್ ಭಾಷೆ ಬರದ ಕಾರಣ ಮನಬಂದಂತೆ ಥಳಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಭಾರತೀಯ ರಾಯಭಾರಿ ಮೂಲಕ ಅಮೆರಿಕಾ ಸರ್ಕಾರವನ್ನು ಒತ್ತಾಯಿಸಿದೆ.

ಇತ್ತೀಚೆಗಷ್ಟೇ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಭಾರತದಲ್ಲಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಪ್ರಸ್ತಾಪಿಸಿ ಧಾರ್ಮಿಕ ಸಹಿಷ್ಣುತೆ ಉಳಿಸಿಕೊಳ್ಳುವಂತೆ ಉಪದೇಶ ನೀಡಿದ್ದರು. ಆದರೆ ಅಮೆರಿಕಾದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯುವಲ್ಲಿ ಒಬಾಮ ಸರ್ಕಾರ ವಿಫಲವಾಗಿದ್ದು ಭಾರತೀಯರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited