ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕಿರಣ್ ಬೇಡಿ, ಸೋಲಿ ಹೊಣೆ ಹೊತ್ತಿದ್ದು, ಬಿಜೆಪಿ ಹೈಕಮಾಂಡ್ ಕ್ಷಮೆಯಾಚಿಸಿದ್ದಾರೆ.
ಕೃಷ್ಣಾಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿರಣ್ ಬೇಡಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಸ್.ಕೆ.ಬಗ್ಗಾ ವಿರುದ್ಧ 2476 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಡಿ, ದೆಹಲಿ ಚುನಾವನೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ನಿರೀಕ್ಷೆ ಹುಸಿಗಾದ್ದಕ್ಕೆ ಬಿಜೆಪಿ ಕಾರ್ಯಕರ್ತರ ಬಳಿ ನಾನು ಕ್ಷಮೆಯಾಚಿಸುವೆ ಎಂದರು.
ಸೋಲಿನ ಹೊಣೆ ನಾನು ಹೊರುತ್ತೇನೆ ಆದರೆ ನಾನು ಸೋತಿಲ್ಲ ಎಂದ ಅವರು, ದೆಹಲಿಯಲ್ಲಿ ಮತದಾರರು ನೀಡಿರುವ ಜನಾದೇಶವು ದೆಹಲಿಗೆ ಮಾತ್ರವೇ ಸೀಮಿತವಾಗಿದ್ದು,ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವಲ್ಲ ಎಂದರು.
ಕೃಷ್ಣಾಷ್ಣಾನಗರ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಮಾಡಲಿ. ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. 5 ವರ್ಷಗಳ ಅರವಿಂದ್ ಕೇಜ್ರಿವಾಲ್ ಶ್ರಮಕ್ಕೆ ಈಗ ಫಲಸಿಕ್ಕಿದೆ. ಕೇಜ್ರಿವಾಲ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿನಗರದ ಬಡಜನರ ಪರವಾಗಿದ್ದ ಕೇಜ್ರಿವಾಲ್. ಇಂಧಿನ ಗೆಲುವು ಕೇಜ್ರಿವಾಲ್ ಹೋರಾಟಕ್ಕೆ ಸಿಕ್ಕ ಜಯ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ನೀಡಿದ ಭರವಸೆಯನ್ನು ಈಗ ಈಡೇರಿಸಲಿ. ದೆಹಲಿ ಬದಲಾಯಿಸುವ ನಿರೀಕ್ಷೆಯಿದೆ. ದೆಹಲಿ ಅಭಿವೃದ್ಧಿಗೆ ಆಡಳಿತಬೇಕು, ಧರಣಿ ಬೇಕಾಗಿಲ್ಲ. ಕೊಳಚೆ ನಿರ್ಮೂಲನೆಗೆ ಕ್ರಮಕೈಗೊಳ್ಳಲಿ. ಅಂತರಾಷ್ಟ್ರೀಯ ಗುಣಮಟ್ಟವುಳ್ಳ ನಗರವನ್ನಾಗಿ ದೆಹಲಿಯನ್ನು ರೂಪಿಸಲಿ ಎಂದು ತಿಳಿಸಿದರು.