ನವದೆಹಲಿ : 'ದೆಹಲಿ' ವಿಧಾನಸಭೆಗೆ ಮತದಾನ ನಡೆಯುತ್ತಿರುವ ದಿನದಂದೂ ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪ ಕೇಳಿಬಂದಿದೆ.
ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಸ್ಪರ್ಧಿಸಿರುವ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕದಂತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ವತಃ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಆರೋಪ ಮಾಡಿದ್ದು ಬಿಜೆಪಿಗೆ ಮತ ಹಾಕಿದರೆ ಬಾಂಬ್ ಹಾಕುವುದಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಮತದಾನ ಮಾಡುವುದಕ್ಕೂ ಸಹ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ತಡೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮತ ಹಾಕಿದರೆ ಆಮ್ ಆದ್ಮಿ ಪಕ್ಷಕ್ಕೇ ಹಾಕಬೇಕು ಬಿಜೆಪಿಗೆ ಮತ ಹಾಕಿದರೆ ಬಾಂಬ್ ಹಾಕುವುದಾಗಿ ಆಪ್ ಬೆದರಿಕೆ ಹಾಕಿದೆ. ಇದೇ ವೇಳೆ ಮತಗಟ್ಟೆ ಬಳಿ ಆಪ್ ಕಾರ್ಯಕರ್ತರು ಪ್ರತಿ ಮತದಾರರಿಗೂ 300 ರೂಪಾಯಿ ನೀಡಿ ಆಪ್ ಗೇ ಮತ ಹಾಕಬೇಕೆಂದು ಆಮಿಷವೊಡ್ಡುತ್ತಿರುವ ಬಗ್ಗೆಯೂ ಜನಸಾಮಾನ್ಯರಿಂದ ಆರೋಪ ಕೇಳಿಬಂದಿದೆ.