ಪುಣೆ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವಿಧಿವಶರಾಗಿದ್ದಾರೆ.
ಆರ್.ಕೆ ಲಕ್ಷ್ಮಣ್ ಅವರನ್ನು ಪುಣೆಯ ದೀನನಾಥ್ ಮಂಗೇಷ್ಕರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣದಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಕರ್ನಾಟಕದ ಮೈಸೂರು ಮೂಲದವರಾದ 94 ವರ್ಷದ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಯ್ಯರ್ ಅವರಿಗೆ 2005ರಲ್ಲಿ ಕೇಂದ್ರ ಸರ್ಕಾರ ಆರ್.ಕೆ ಲಕ್ಷ್ಮಣ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಆರ್.ಕೆ.ನಾರಾಯಣ್ ಅವರ ಸಹೋದರರಾದ ಆರ್.ಕೆ ಲಕ್ಷ್ಮಣ್ ಮೈಸೂರಿನಲ್ಲಿ 1921ರ ಅಕ್ಟೋಬರ್ 24ರಂದು ಜನಿಸಿದ್ದರು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕಾಮನ್ ಮ್ಯಾನ್ ಕಾರ್ಟೂನುಗಳನ್ನು ಆರ್.ಕೆ ನಾರಾಯಣ್ ಅವರು ಚಿತ್ರಿಸುತ್ತಿದ್ದರು.
ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಆರ್.ಕೆ ಲಕ್ಷ್ಮಣ್ ಅವರ ನೆನಪು ಅಜರಾಮರ. ಆರ್.ಕೆ ಲಕ್ಷ್ಮಣ್ರ ಕುಟುಂಬಕ್ಕೆ ಪರಮಾತ್ಮ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.