ನವದೆಹಲಿ : 'ಆರ್.ಎಸ್.ಎಸ್' ರಾಷ್ಟ್ರೀಯವಾದಿ ಸಂಘಟನೆಯಾಗಿದ್ದು, ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ದೆಹಲಿ ಬಿಜೆಪಿ ಸಿ.ಎಂ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ಬೇಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶವನ್ನು ಒಗ್ಗೂಡಿಸಿದ್ದು ದೇಶದ ಅಭಿವೃದ್ಧಿಯಲ್ಲಿ ಆರ್.ಎಸ್.ಎಸ್ ಮಹತ್ವದ ಪಾತ್ರ ವಹಿಸಿದೆ. ಆದರೆ ಎಷ್ಟೋ ಜನರಿಗೆ ನಿಜವಾದ ಆರ್.ಎಸ್.ಎಸ್ ಬಗ್ಗೆ ತಿಳಿದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಜ್ರಿವಾಲ್ ಅವರು ದೆಹಲಿ ರಾಜಕೀಯಕ್ಕೆ ಒಳಬಂದಾಗಿನಿಂದಲೂ ಇಲ್ಲಿ ದೊಡ್ಡ ಪರಿವರ್ತನೆ ಆಗಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ರಾಜಕೀಯ ಪ್ರವೇಶ ಮಾಡಿದಾಗಿನಿಂದ ಬಹಳಷ್ಟು ಬದಲಾವಣೆಗಳಾಗಿವೆ. ನಾನು ರಾಜಕೀಯಕ್ಕೆ ಬರಲು ದೆಹಲಿಯೇ ಕಾರಣ ಎಂದು ಕಿರಣ್ ಬೇಡಿ ಹೇಳಿದ್ದಾರೆ. ದೆಹಲಿಯಲ್ಲಿ ಏನೇ ನಡೆದರೂ ಭಾರತದಲ್ಲಿ ಅದು ನಡೆಯುತ್ತದೆ. ಭಾರತದ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿರುವ ಕಿರಣ್ ಬೇಡಿ ಅರಾಜಕತೆ ಸೃಷ್ಟಿಸುತ್ತೇನೆಂದು ಹೇಳುವವರದ್ದು ಎಂತಹ ವ್ಯಕ್ತಿತ್ವ? ಎಂದು ಪ್ರಶ್ನಿಸಿದ್ದಾರೆ.