ಬೆಂಗಳೂರು : ಚಲುವರಾಯಸ್ವಾಮಿ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಆದಿಚುಂಚನಗಿರಿಯ ಬೆಂಗಳೂರಿನ ಶಾಖಾ ಮಠಕ್ಕೆ ಜೆಡಿಎಸ್ ನ ಉಭಯ ನಾಯಕರು ಭೇಟಿ ನೀಡಿದ ಬಳಿಕ ಮಾತನಾಡಿದ ಕುಮಾರ್ಸ್ವಾಮಿ, ರಾಜಕೀಯೇತರ ವಿಚಾರದ ಬಗ್ಗೆ ಚರ್ಚೆ ನಡೆಸಲು ಸ್ವಾಮೀಜಿ ಕರೆದಿದ್ದರು ಎಂದರು.
ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ನಮ್ಮ ಸಮಾದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ನನ್ನ ಹಾಗೂ ಚೆಲುವರಾಯಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಒಂದು ವರ್ಗದ ವ್ಯಕ್ತಿಗಳು ವದಂತಿಗಳನ್ನು ಹಬ್ಬಿಸುತ್ತಿವೆ. ಆದರೆ ಅದರಿಂದ ಅವರಿಗೇನೂ ಲಾಭವಿಲ್ಲ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಚಲುವರಾಯಸ್ವಾಮಿ, ಮಠದ ಅಂಗಳಕ್ಕೆ ನಾನೆಂದೂ ರಾಜಕೀಯ ತಂದಿಲ್ಲ. ನಮ್ಮಿಬ್ಬರಲ್ಲಿ ಮಾತನಾಡದ ಮಟ್ಟಕ್ಕೆ ಭಿನ್ನಾಭಿಪ್ರಾಯಗಳೇನೂ ಇಲ್ಲ. ಕೆಲ ರಾಜಕೀಯ ವಿಷಯದ ಚರ್ಚೆಗಾಗಿ ಸ್ವಾಮೀಜಿ ಕರೆದಿದ್ದರು ಎಂದು ಹೇಳಿದರು.