ಕರಾಚಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿರುವುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದೆ. ಇತ್ತೀಚೆಗೆ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಪಾಕಿಸ್ಥಾನದ ಮೊಬೈಲ್ ನಂಬರ್ನಿಂದ ಮುಂಬಯಿಯ ಓರ್ವ ಬಿಲ್ಡರ್ಗೆ ಫೋನ್ ಮಾಡಿ 5 ಕೋ. ರೂ. ಹಫ್ತಾ ಕೇಳಿದ್ದಾನೆ.
ಈ ಮೂಲಕ ದಾವೂದ್ ಮತ್ತು ಅವನ ಪರಿವಾರದವರು ತಮ್ಮ ದೇಶದಲ್ಲಿಲ್ಲ ಎನ್ನುವ ಪಾಕಿಸ್ಥಾನದ ಪ್ರತಿಪಾದನೆ ಸುಳ್ಳು ಎನ್ನುವುದನ್ನು ಈ ಕರೆ ದೃಢಪಡಿಸಿದೆ.
ನವಿಮುಂಬಯಿಯ ಖಾರ್ಘರ್ನಲ್ಲಿ ಬಹುಮಹಡಿ ಭವನ ನಿರ್ಮಿಸುತ್ತಿರುವ ಬಿಲ್ಡರ್ಗೆ ಇತ್ತೀಚೆಗೆ ಅನೀಸ್ನ ಸಹಚರ ಸಿಕಂದರ್ ಎಂಬಾತ ಫೋನ್ ಮಾಡಿ ತುರ್ತಾಗಿ ಅನೀಸ್ನನ್ನು ಸಂಪರ್ಕಿಸಬೇಕೆಂದು ಹೇಳಿ ಎರಡು ಮೊಬೈಲ್ ನಂಬರ್ ಕೊಟ್ಟಿದ್ದಾನೆ. ಈ ಎರಡು ನಂಬರ್ಗಳು ಪಾಕಿಸ್ಥಾನದ್ದು ಎಂದು ತನಿಖೆಯಲ್ಲಿ ಪತ್ತೆಯಾಗಿವೆ.
ದಾವೂದ್ ಕರಾಚಿಯಲ್ಲೇ ಇದ್ದಾನೆ. ಪಾಕಿಸ್ಥಾನ-ಅಫ್ಘಾನಿಸ್ಥಾನ ಗಡಿ ಭಾಗಕ್ಕೆ ಪಲಾಯನ ಮಾಡಿದ್ದಾನೆ ಎನ್ನುವುದು ಭಾರತವನ್ನು ದಿಕ್ಕುತಪ್ಪಿಸಲು ನೀಡಿದ ಹೇಳಿಕೆ. ಮಕ್ಕಾ ಮದೀನ ಯಾತ್ರೆ ಕೈಗೊಳ್ಳಲು ಪಾಕಿಸ್ಥಾನ ಸರಕಾರವೇ ಅವನಿಗೆ ಖಾಸಗಿ ವಿಮಾನದ ಏರ್ಪಾಡು ಮಾಡಿಕೊಡುತ್ತದೆ ಎಂದು ಗುಪ್ತಚರ ಪಡೆ ಮೂಲಗಳು ತಿಳಿಸಿವೆ.