Untitled Document
Sign Up | Login    
Dynamic website and Portals
  
January 17, 2015

ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ: ದೂರವಾಣಿ ಕರೆಯಿಂದ ಖಚಿತ

ಕರಾಚಿ : ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ಥಾನದಲ್ಲಿರುವುದಕ್ಕೆ ಇನ್ನೊಂದು ಪುರಾವೆ ಸಿಕ್ಕಿದೆ. ಇತ್ತೀಚೆಗೆ ದಾವೂದ್‌ ಇಬ್ರಾಹಿಂ ಸಹೋದರ ಅನೀಸ್‌ ಇಬ್ರಾಹಿಂ ಪಾಕಿಸ್ಥಾನದ ಮೊಬೈಲ್‌ ನಂಬರ್‌ನಿಂದ ಮುಂಬಯಿಯ ಓರ್ವ ಬಿಲ್ಡರ್‌ಗೆ ಫೋನ್‌ ಮಾಡಿ 5 ಕೋ. ರೂ. ಹಫ್ತಾ ಕೇಳಿದ್ದಾನೆ.

ಈ ಮೂಲಕ ದಾವೂದ್‌ ಮತ್ತು ಅವನ ಪರಿವಾರದವರು ತಮ್ಮ ದೇಶದಲ್ಲಿಲ್ಲ ಎನ್ನುವ ಪಾಕಿಸ್ಥಾನದ ಪ್ರತಿಪಾದನೆ ಸುಳ್ಳು ಎನ್ನುವುದನ್ನು ಈ ಕರೆ ದೃಢಪಡಿಸಿದೆ.

ನವಿಮುಂಬಯಿಯ ಖಾರ್‌ಘರ್‌ನಲ್ಲಿ ಬಹುಮಹಡಿ ಭವನ ನಿರ್ಮಿಸುತ್ತಿರುವ ಬಿಲ್ಡರ್‌ಗೆ ಇತ್ತೀಚೆಗೆ ಅನೀಸ್‌ನ ಸಹಚರ ಸಿಕಂದರ್‌ ಎಂಬಾತ ಫೋನ್‌ ಮಾಡಿ ತುರ್ತಾಗಿ ಅನೀಸ್‌ನನ್ನು ಸಂಪರ್ಕಿಸಬೇಕೆಂದು ಹೇಳಿ ಎರಡು ಮೊಬೈಲ್‌ ನಂಬರ್‌ ಕೊಟ್ಟಿದ್ದಾನೆ. ಈ ಎರಡು ನಂಬರ್‌ಗಳು ಪಾಕಿಸ್ಥಾನದ್ದು ಎಂದು ತನಿಖೆಯಲ್ಲಿ ಪತ್ತೆಯಾಗಿವೆ.

ದಾವೂದ್‌ ಕರಾಚಿಯಲ್ಲೇ ಇದ್ದಾನೆ. ಪಾಕಿಸ್ಥಾನ-ಅಫ್ಘಾನಿಸ್ಥಾನ ಗಡಿ ಭಾಗಕ್ಕೆ ಪಲಾಯನ ಮಾಡಿದ್ದಾನೆ ಎನ್ನುವುದು ಭಾರತವನ್ನು ದಿಕ್ಕುತಪ್ಪಿಸಲು ನೀಡಿದ ಹೇಳಿಕೆ. ಮಕ್ಕಾ ಮದೀನ ಯಾತ್ರೆ ಕೈಗೊಳ್ಳಲು ಪಾಕಿಸ್ಥಾನ ಸರಕಾರವೇ ಅವನಿಗೆ ಖಾಸಗಿ ವಿಮಾನದ ಏರ್ಪಾಡು ಮಾಡಿಕೊಡುತ್ತದೆ ಎಂದು ಗುಪ್ತಚರ ಪಡೆ ಮೂಲಗಳು ತಿಳಿಸಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited