ಬೆಂಗಳೂರು : ರಾಜ್ಯ ಬಿಜೆಪಿ ಘಟಕದ ವಿರುದ್ಧ ವಕೀಲ ಎ.ಕೆ. ಸುಬ್ಬಯ್ಯ ವಾಗ್ದಾಳಿ ನಡೆಸಿದ್ದು, ಬಿಜೆಪಿ ಜವಾಬ್ದಾರಿಯುತ ವಿಪಕ್ಷದಂತೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡಿರುವ ಬಿಜೆಪಿ ಅವರ ಮೂಲಕ ಆಡಳಿತ ನಡೆಸಲು ಯತ್ನಿಸುತ್ತಿದೆ, ಈ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಎ.ಕೆ ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹಿಂದೂ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂ ಮಹಿಳೆಯೂ 4 ಮಕ್ಕಳಿಗೆ ಜನ್ಮನೀಡಬೇಕೆಂಬ ಸಂಸದ ಸಾಕ್ಷಿ ಮಹಾರಾಜ್ ಹೇಳಿಕೆಗೆ ಕಿಡಿಕಾರಿರುವ ಸುಬ್ಬಯ್ಯ, ಹಿಂದೂ ಧರ್ಮದ ರಕ್ಷಣೆಗಾಗಿ ಇನ್ನು ಮುಂದೆ ಒಬ್ಬೊಬ್ಬ ಆರ್.ಎಸ್.ಎಸ್ ಪ್ರಚಾರಕರೂ ನಾಲ್ಕು ಮದುವೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಕ್ಪ್ರಹಾರ ನಡೆಸಿರುವ ಎ.ಕೆ ಸುಬ್ಬಯ್ಯ, ನರೇಂದ್ರ ಮೋದಿ ಅವರು ಮಕ್ಕಳನ್ನು ಪಡೆದಿಲ್ಲ, ಈ ಮೂಲಕ ಅವರು ಹಿಂದೂ ಧರ್ಮಕ್ಕೆ ಧ್ರೋಹ ಬಗೆದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.